Monday, May 13, 2024

PSI ಅಕ್ರಮ ; ಮಾಗಡಿ ಒಂದರಲ್ಲೇ 2ಕೋಟಿ ಕಲೆಕ್ಷನ್‌ : ಡಿ ಕೆ ಶಿವಕುಮಾರ್​​

ಬೆಂಗಳೂರು : PSI ನೇಮಕಾತಿ ಪ್ರಕರಣದಲ್ಲಿ 80 ಲಕ್ಷ ಮಾತ್ರವಲ್ಲ ಮಾಗಡಿ ಒಂದರಲ್ಲಿ ಎರಡು ಕೋಟಿ ಕಲೆಕ್ಷನ್‌ ಆಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಡಿ ಕೆ ಶಿವಕುಮಾರ್​​ ಅಕ್ರಮದಲ್ಲಿ ಭಾಗಿಯಾದವರ ವಿರುದ್ದ ಕಿಡಿಕಾರಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೀತ್ ಶಾ ಅವರ ಪಾರ್ಟಿ,ಸರ್ಕಾರದ ಕೆಲಸಕ್ಕೆ ಬಂದಿದ್ದಾರೆ. ಅದರಲ್ಲಿ ಇಂಟರ್ಫೇರ್ ಆಗಲ್ಲ ಎಂದರು.

ಇನ್ನು ಪ್ರಕರಣದಲ್ಲಿ ನನಗೆ ಬಂದಿರುವ ಮಾಹಿತಿ ಪ್ರಕಾರ ಯುವಕರ ಭವಿಷ್ಯ ಮಲ್ಲೇಶ್ವರಂಗೆ, ಮಾಗಡಿಗೆ ಮಾತ್ರ ಸೀಮಿತವಾಗಿಲ್ಲ,ಇಡೀ  ರಾಜ್ಯದ ಯುವಕರಿಗೆ ಸಂಬಂಧಿಸಿದೆ. PWD ಯಲ್ಲೂ ಸ್ಕ್ಯಾಮ್, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಯಲ್ಲೂ ಸ್ಕ್ಯಾಮ್ ಯುವಕರಿಗೆ ಎಲ್ಲಿ ನ್ಯಾಯವಿದೆ. ಹತ್ತು ಲಕ್ಷ, ಎರಡು ಲಕ್ಷ ಕೊಟ್ಟಿದ್ದಾರೆ ಕೆಲವರು ಆಸ್ತಿ ಮಾರಾಟ ಮಾಡಿದ್ದಾರೆ. ಹಾಗಾಗಿ ಇದರಲ್ಲಿ ಭಾಗಿಯಾಗಿರುವ ಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದರು.

ಮಲ್ಲೇಶ್ವರಂನಲ್ಲಿರುವಂತ ಸಿಇಟಿಯವರು ಮಲ್ಲೇಶ್ವರಂ ಪೊಲೀಸ್ ಸ್ಟೇಷನ್​​ನಲ್ಲಿ ದೂರು ಕೊಟ್ಟಿದ್ದಾರೆ. ಅನುಮಾನ ಇಲ್ಲದೆ ದೂರು ಕೊಡ್ತಾರಾ? ತನಿಖೆ ಆಗುತ್ತಾ, ಕೆಲ ಓಪನ್​​ ಯೂನಿವರ್ಸಿಟಿಯಲ್ಲಿ ನಡೆದ ಪರೀಕ್ಷೆಗಳ ಬಗ್ಗೆಯೂ ನಮಗೆ ಪತ್ರ ಬರೆದಿದ್ದಾರೆ. ಪಿಎಸ್​​ಐಯಲ್ಲಿ
ಮೂರು ಜನ ಫಸ್ಟ್ ರ್ಯಾಂಕ್ ಬಂದಿದ್ದಾರೆ, ಅದರಲ್ಲಿ ಹತ್ತು ಜನಕ್ಕೆ ಮೂರು ಜನ ಮಾಗಡಿಯವರಾಗಿದ್ದಾರೆ.

ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯತ್ನಾಳಾದರೂ ಮಾತಾಡಲಿ ಯಾರಾದರೂ ಮಾತಾಡಲಿ, ನಮಗೆ ಅದು ಪ್ರಶ್ನೆಯಲ್ಲ. ಸಮರ್ಥರೂ ಅಸಮರ್ಥರೋ, ಯಾವ ಫಾರ್ಮಲ್ ಬರುತ್ತೋ ? ಯುಪಿ, ಗುಜರಾತ್,ದೆಹಲಿ ಫಾರ್ಮಲ್ ಆದರೂ ಬರಲಿ? ಕರ್ನಾಟಕದಲ್ಲಿ ಹೊಸ ಫಾರ್ಮಲ್ ಆದ್ರೂ‌ ಮಾಡಲಿ. ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಆಡಳಿತ ಕೊಡಬೇಕು. ಭ್ರಷ್ಟಾಚಾರ ನಿಲ್ಲಬೇಕು ಎಂದರು. ಇನ್ನು ದರ್ಶನ ಗೌಡ ಕೊಟ್ಟ ಹೇಳಿಕೆಗೆ ಯಾರು ಬರೆಸಿದ್ರು ಎಂದು ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ಕೊಡಲಿ.

ಸಚಿವರ ಸಹೋದರರನ್ನು ವಿಚಾರಣೆಗೆ ಒಳಪಡಿಸುವ ವಿಚಾರ ಹಿನ್ನೆಲೆ ಯಾಕೆ ಬಿಟ್ಟು ಕಳಿಸಿದ್ದಾರೆ ಗೊತ್ತಾ. ಇದು ಸಚಿವರಿಗೆ ನೇರವಾಗಿ ಲಿಂಕ್ ಹೋಗುತ್ತದೆ. ಹೀಗಾಗಿ ಕುಂಬಳಕಾಯಿ ಕಳ್ಳ ಅಂದರೆ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ? ರಾಮನಗರ ಕ್ಲೀನ್ ಮಾಡ್ತೇನೆ ಅಂದ್ರು…ಇದೇನಾ ಕ್ಲೀನ್…? ಎಂದು ಅಶ್ವಥ್ ನಾರಾಯಣ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES