Friday, September 20, 2024

ಶಾಸಕ ಪ್ರೀತಂಗೌಡ – ಮಾಜಿ ಸಚಿವ ರೇವಣ್ಣ ಟಾಕ್ ಫೈಟ್

ಹಾಸನ: ಹಾಸನದ ಕೆಡಿಪಿ ಸಭೆಯಲ್ಲಿ ಶಾಸಕ ಪ್ರೀತಂಗೌಡ – ಮಾಜಿ ಸಚಿವ ರೇವಣ್ಣ ರವರಿಗೆ ವಾಗ್ವಾದ. ಹಾಸನದ ಚನ್ನಪಟ್ಟಣ ಕೆರೆ ಅಭಿವೃದ್ಧಿ ವಿಚಾರದಿಂದ ಶುರುವಾದ ವಾಗ್ವಾದ, ಕೆರೆಗೆ ಅಭಿವೃದ್ಧಿ ಗೆ 144.ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಗೆ ಯೋಜನೆ ಆಗಿತ್ತು.

ಈ ಯೋಜನೆ ಬದಲಾಯಿಸಲಾಗಿದೆ ಎಂದು ರೇವಣ್ಣ ಆಕ್ಷೇಪ,ಆದರೆ ಸಂಪುಟ ಸಭೆಯಲ್ಲಿ ತೀರ್ಮಾನ ಆದಂತೆ ಕಾಮಗಾರಿ ನಡೆಯುತ್ತಿದೆ ಎಂದು ಪ್ರೀತಂಗೌಡ ತಿರುಗೇಟು.ಈ ವೇಳೆ ಈ ಸರ್ಕಾರ ಯಾವುದೇ ಅನುದಾನ ಕೊಟ್ಟಿಲ್ಲ ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದ ರೇವಣ್ಣ.ಈ ವೇಳೆ ಹಳೆಬೀಡು ನೀರಾವರಿ ಯೋಜನೆಗೆ ಹಣ ಕೊಟ್ಟಿಲ್ವಾ ಎಂದ ಪ್ರೀತಂಗೌಡ.ಬರೀ ಘೋಷಣೆ ಮಾಡಿ ಹೋಗ್ತೀರಾ ಕೆಲಸ ಮಾಡೋದು ನಾವೇ ಎಂದ ಪ್ರೀತಂಗೌಡ. ಇದ್ರಿಂದ ಕೆರಳಿದ ಸಚಿವ ರೇವಣ್ಣ ನಿಮ್ಮ ಸರ್ಕಾರ ಏನೂ ಮಾಡಿಲ್ಲ ಎಂದು ಆಕ್ರೋಶ
ರಾಜಕಾರಣ ಹೊರಗೆ ಮಾಡೋಣ ಇಲ್ಲಿ ಕೆಡಿಪಿ ಬಗ್ಗೆ ಮಾತಾಡಿ ಎಂದ ಪ್ರೀತಂಗೌಡ.

ಯಡಿಯೂರಪ್ಪ ಈ ಜಿಲ್ಲೆಗೆ ಏನು ಅನ್ಯಾಯ ಮಾಡಿದಾರೆ ಎಂದು ರೇವಣ್ಣ ಗುಡುಗು,ಕೆಡಿಪಿ ಸಭೆಯಲ್ಲಿ ಯಡಿಯೂರಪ್ಪ ಹೆಸರು ಯಾಕೆ ತರ್ತೀರಾ.ಯಡಿಯೂರಪ್ಪ ರಿಂದ ಏನು ಕೆಲಸ ಆಗಿದೆ ಎಂದು ಈ ಜಿಲ್ಲೆಯ ಜನರಿಗೆ ಗೊತ್ತಿದೆ ಎಂದ ಪ್ರೀತಂಗೌಡ.ಇದ್ರಿಂದ ಕೆರಳಿದ ರೇವಣ್ಣ ಆಕ್ರೋಶ,ಇಬ್ಬರು ನಾಯಕರ ನಡುವೆ ವಾಗ್ವಾದದಿಂದ ಕಂಗೆಟ್ಟು ಕುಳಿತ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ. ನನ್ನ ಕ್ಷೇತ್ರದಲ್ಲಿ ಏನು ಕೆಲಸ ಆಗಬೇಕು ಎಂದು ನಾನು ಶಾಸಕ ಇದೀನಿ ಮಾತಾಡ್ತಿನಿ ಎಂದ ಪ್ರೀತಂಗೌಡ.ಇದು ಜಿಲ್ಲಾ ಕೇಂದ್ರ ಹಾಸನ ಕೇವಲ ಒಬ್ಬ ಕ್ಷೇತ್ರದ ಶಾಸಕನಿಗೆ ಸೇರಲ್ಲ ಎಂದು ರೇವಣ್ಣ ತಿರುಗೇಟು.

RELATED ARTICLES

Related Articles

TRENDING ARTICLES