Friday, September 20, 2024

ಲಾರಿ ಹರಿದು ಕುರಿಗಾಯಿ ಸೇರಿದಂತೆ 15 ಕ್ಕೂ ಹೆಚ್ಚು ಕುರಿಗಳ ಸಾವು

ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಕುರಿಗಾಯಿ ಹಾಗೂ ಕುರಿಗಳ ಮೇಲೆ ಲಾರಿ ಹರಿದು ಓರ್ವ ಕುರಿಗಾಯಿ ಯುವಕ ಹಾಗೂ 15ಕ್ಕೂ ಹೆಚ್ಚು ಕುರಿಗಳ ಸಾವು ಆಗಿದೆ.

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ಯುಕೆಪಿ ಬಳಿ ಈ ದುರ್ಘಟನೆ ನಡೆದಿದೆ. ರಾಮು ಗೊಲ್ಲರ್ (20) ಮೃತಪಟ್ಟ ದುರ್ದೈವಿ, ಸ್ಥಳದಲ್ಲಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.

ಲಾರಿ ಚಾಲಕನ ಅಜಾಗರೂಕತೆ, ಅತಿವೇಗದ ಚಾಲನೆ ಕಾರಣ ನಿಯಂತ್ರಣ ತಪ್ಪಿದ ಸಿಮೆಂಟ್ ತುಂಬಿದ್ದ ಲೋಡೆಡ್ ಲಾರಿ ಕುರಿ ಹಾಗೂ ಕುರಿಗಾಯಿ ಯುವಕನ ಮೇಲೆ ಹರಿದಿದೆ.

ಅಪಘಾತದ ಬಳಿಕ ಲಾರಿಯನ್ನ ಪಟ್ಟಣದ ಕೋರಮ್ಮ ದೇವಸ್ಥಾನದ ಬಳಿ ಸ್ಥಳೀಯರು ತಡೆದು ನಿಲ್ಲಿಸಿದ್ದಾರೆ. ಸ್ಥಳಕ್ಕೆ ಪೊಲೀಸರ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದು, ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES