Friday, September 20, 2024

ರುದ್ರ ಭೂಮಿಗಾಗಿ ರಸ್ತೆ ಮಧ್ಯೆ ಶವ ಇಟ್ಟು ಪ್ರತಿಭಟನೆ

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಹೆಚ್ಚೆ ಗ್ರಾಮಸ್ಥರಿಂದ ರುದ್ರ ಭೂಮಿಗಾಗಿ ರಸ್ತೆ ಮಧ್ಯೆ ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.

ಮಂಜೂರಾದ ರುದ್ರ ಭೂಮಿಯ ಗಡಿಯನ್ನು ಗುರುತಿಸಿ ಶವ ಹೂಳಲು ಅವಕಾಶ ನೀಡಬೇಕೆಂದು ಹಲವು ದಿನಗಳಿಂದ ಈ ಬಗ್ಗೆ ಹತ್ತಾರು ಬಾರಿ ಮನವಿ ನೀಡಿದರೂ ಸ್ಪಂದಿಸದ ಹಿನ್ನಲೆಯಲ್ಲಿ ಸ್ಥಳೀಯಾಡಳಿತ ವಿರುದ್ಧ  ಶವ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು.

ರುದ್ರ ಭೂಮಿಗಾಗಿ 4 ಎಕರೆ ಜಾಗವು ಮಂಜೂರಾಗಿದ್ದರೂ ಪಕ್ಕದ ಊರಿನವರು ಅತಿಕ್ರಮಣ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಹೆಚ್ಚೆ ಗ್ರಾಮದಲ್ಲಿ ನಿಧನರಾದವರ ಶವವನ್ನು ಸೊರಬ ಪಟ್ಟಣದ ಮುಖ್ಯ ರಸ್ತೆಯಲ್ಲಿ ಶವವನ್ನು ಇಟ್ಟು ಪ್ರತಿಭಟನೆ ಮಾಡಲಾಯಿತು. ತದ ನಂತರ ಶವವನ್ನು ತಂದು ತಾಲೂಕು ಕಛೇರಿ ಮುಂಭಾಗ ತರಲಾಯಿತು.

RELATED ARTICLES

Related Articles

TRENDING ARTICLES