Sunday, October 27, 2024

ಅಮಿತ್ ಶಾ ಬೇಟಿ ಮಾಡಿದ ಸಿಎಂ

ಬೆಂಗಳೂರು : ಭಯದ ವಾತಾವರಣದಲ್ಲಿಯೇ ಅಮಿತ್ ಶಾ ಅವರನ್ನು ಸಿಎಂ ಬಸವರಾಜ್​ ಬೊಮ್ಮಾಯಿ ಭೇಟಿ ಮಾಡಿದ್ದಾರೆ.

ನಗರದಲ್ಲಿ ಸಿಎಂ ಹಾಗು ಅಮಿತ್ ಷಾ ಭೇಟಿಯ ಇನ್ ಸೈಡ್ ಏನಾಯ್ತು. 20 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದ ಚಾಣಕ್ಯ. ಸರ್ಕಾರಿ ಕಾರ್ಯಕ್ರಮದ ಅಥಿತಿಯಾಗಿ ಹೆಸರಿಗಷ್ಟೇ ಅಮಿತ್. ಆದ್ರೆ ರಾಜ್ಯರಾಜಕಾರಣದ ಒಳ ಮಾಹಿತಿ ರಾಜ್ಯ ನಾಯಕರಿಗೆ ಬಿಸಿ ಮುಟ್ಟಿಸಲು ಬಂದಿದ್ದಾರೆ. ಹೀಗಾಗಿ ಸಿಎಂ ಮೇಲೆ ಅಮಿತ್ ಷಾ ಗರಂ ಆಗಿದ್ದಾರೆ.

ಇನ್ನು, ಮಂಗಳೂರು ಹತ್ಯೆ ಹಾಗು ನಂತರ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಧಾನ ಹೊರ ಹಾಕಿದ ಶಾ. ಕಾರ್ಯಕರ್ತರ ರಾಜೀನಾಮೆ ಇದೇ ಮೊದಲಬಾರಿಗೆ ಪಕ್ಷಕ್ಕೆ ದೊಡ್ಡ ಮುಜುಗರ ಆಗಿದೆ. ರಾಷ್ಟ್ರಮಟ್ಟದಲ್ಲಿ ಇದು ಸುದ್ದಿಯಾಯಿತು. ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್ ಆಯಿತು. ಕೂಡಲೇ ಕಾರ್ಯಕರ್ತರ ವಿಶ್ಚಾಸಗಳಿಸಲು ನೀವು ಕ್ರಮಕೈಗೊಳ್ಳಬೇಕಿತ್ತು, ಇದು ಪುನರಾವರ್ತನೆ ಆಗದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES