ಟೀಸರ್ ಹಾಗೂ ಟ್ರೈಲರ್ ಮೂಲಕವೇ ಸಂಚಲನ ಮೂಡಿಸಿದ್ದ ಸಿನಿಮಾ ಕರ್ಮಣ್ಯೆ ವಾಧಿಕಾರಸ್ತೆ. ಟೈಟಲ್ ಸಖತ್ ಡಿಫರೆಂಟ್ ಆಗಿದೆ. ಇನ್ನೂ ಹೊಸಬರ ಪ್ರಯತ್ನಕ್ಕೆ ಸೂಪರ್ ಮುದ್ರೆ ಒತ್ತಿದ್ದ ಪ್ರೇಕ್ಷಕರು ಕೂಡ ಥಿಯೇಟರ್ನತ್ತ ಹೆಜ್ಜೆ ಹಾಕಿದ್ರು. ರಾಜ್ಯಾದ್ಯಂತ ರಿಲೀಸ್ ಆಗಿರೋ ಈ ಸಿನಿಮಾ ಚಿತ್ರರಸಿಕರನ್ನು ಕೈ ಬೀಸಿ ಕರಿತೀದೆ. ಇದ್ರ ಜತೆಯಲ್ಲಿ ಈ ಸಿನಿಮಾ ಬ್ಲಾಕ್ ಬಸ್ಟರ್ ಸಿನಿಮಾ ನೆನಪು ಮಾಡ್ತಿದೆ, ಯೆಸ್.. ಯಾವುದು ಆ ಸೂಪರ್ ಹಿಟ್ ಸಿನಿಮಾ ಅಂತೀರಾ..?
ಸೂರ್ಯ 7th ಸೆನ್ಸ್ ನೆನಪಿಸಿದ ‘ಕರ್ಮಣ್ಯೇ ವಾಧಿಕಾರಸ್ತೇ’..!
ಭಗವದ್ಗೀತೆಯ ಸಾರ.. ಪಾಪ-ಪುಣ್ಯ ಕರ್ಮಫಲಗಳ ವಿಚಾರ
ಆಕರ್ಷಕ ಟ್ರೈಲರ್ ಮೂಲಕವೇ ಎಲ್ಲರ ಅಟೆನ್ಷನ್ ತನ್ನ ಕಡೆಗೆ ತಿರುಗುವಂತೆ ಮಾಡಿದ್ದ ಸಿನಿಮಾ ಕರ್ಮಣ್ಯೆ ವಾಧಿಕಾರಸ್ತೆ. ಟೈಟಲ್ ಎಷ್ಟು ಇಂಟ್ರೆಸ್ಟಿಂಗ್ ಆಗಿದಿಯೋ ಅಷ್ಟೆ ಪ್ರಮಾಣದ ಕೂತೂಹಲವನ್ನು ಟ್ರೈಲರ್ ಮೂಡಿಸಿತ್ತು. ಭಗವದ್ಗೀತೆಯ ಸಾರವನ್ನು ಒತ್ತಿ ಹೇಳ್ತಾ ಇದ್ರು, ಕೃಷ್ಣನ ಸಂದೇಶವೇನೋ ಇದೆ ಅನ್ನೊ ಕಾತರವನ್ನು ದುಪ್ಪಟ್ಟು ಮಾಡಿತ್ತು. ಇದೀಗ ರಾಜ್ಯಾದ್ಯಂತ ರಿಲೀಸ್ ಆಗಿರೋ ಕರ್ಮಣ್ಯೆ ವಾಧಿಕಾರಸ್ತೆ ಸಿನಿಮಾಗೆ ಗುಡ್ ರೆಸ್ಪಾನ್ಸ್ ಸಿಗ್ತಿದೆ.
ಈ ಸಿನಿಮಾದ ಕೆಲವು ಸೀನ್ಗಳು ಸೂರ್ಯ ಅಭಿನಯದ 7thಸೆನ್ಸ್ ಸಿನಿಮಾ ನೆನಪು ಮಾಡ್ತಿವೆ. ಈ ಚಿತ್ರದ ಟ್ರೈಲರ್ ನೋಡಿದಾಗ್ಲೇ ಬೌದ್ಧ ಬಿಕ್ಕುಗಳನ್ನು ತೋರಿಸಲಾಗಿತ್ತು. ಸೂರ್ಯ ಅವ್ರ 7th ಸಿನಿಮಾ ಕೂಡ ವೈರಸ್ ವಿರುದ್ಧ ಹೋರಾಡೋ ಅದ್ಭುತ ದೃಶ್ಯಗಳ ಮೂಲಕ ಬ್ಲಾಕ್ ಬಸ್ಟರ್ ಹಿಟ್ ದಾಖಲಿಸಿತ್ತು. ಇದೀಗ ಕರ್ಮಣ್ಯೆ ವಾಧಿಕಾರಸ್ತೆ ಸಿನಿಮಾ ಕೂಡ 7th ಸಿನಿಮಾ ಮೀರಿಸ್ತಿದೆ ಅನ್ನೋ ಟಾಕ್ ಓಡಾಡ್ತಿದೆ.
ಶ್ರೀ ಹರಿ ಅನಂದ್ ನಿರ್ದೇಶನ, ರಮೇಶ್ ರಾಮಯ್ಯ ನಿರ್ಮಾಣಕ್ಕೆ ಪ್ರೇಕ್ಷಕ ಬಹುಪರಾಕ್ ಎಂದಿದ್ದಾನೆ. ಎಲ್ಲೆಡೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಅವನಿ ಪ್ರೊಡಕ್ಷನ್ ಬ್ಯಾನರ್ನಲ್ಲಿ, ರಿತ್ವಿಕ್ ಮುರುಳಿಧರ್ ಮ್ಯೂಸಿಕ್ ಕಂಪೋಸಿಂಗ್ನಲ್ಲಿ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಉದಯ್ ಲೀಲಾ ಕ್ಯಾಮೆರಾ ಕೈಚಳಕಕ್ಕೆ ಎಲ್ಲರೂ ಭೇಷ್ ಎಂದಿದ್ದಾರೆ. ಪ್ರತೀಕ್ ಸುಬ್ರಮಣಿ ನಾಯಕನಾಗಿ, ದಿವ್ಯಾ, ಡೊಲ್ಮಾ ಹೀರೋಯಿನ್ಸ್ ಆಗಿ ಮಿಂಚಿದ್ದಾರೆ. ಅಮೇರಿಕಾದಲ್ಲೂ ಸದ್ದು ಮಾಡಿರೋ ಕರ್ಮಣ್ಯೆ ವಾಧಿಕಾರಸ್ತೇ ಹೊಸಬರ ಸಿನಿಮಾವಾಗಿದ್ದು, ಹೊಸಬರ ಪ್ರಯತ್ನಕ್ಕೂ ಪ್ರೇಕ್ಷಕ ಸೈ ಎಂದಿದ್ದಾನೆ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ