Thursday, September 19, 2024

ಕಾಂಗ್ರೆಸ್​​​ನಲ್ಲಿ ಭುಗಿಲೇಳುತ್ತಾ ಸಿದ್ದರಾಮೋತ್ಸವ v/s ಶಿವಕುಮಾರೋತ್ಸವ ಜಟಾಪಟಿ

ಬೆಂಗಳೂರು : ಸಿದ್ದರಾಮೋತ್ಸವ ಸಮಾರಂಭಕ್ಕೆ ಬೆಂಬಲಿಗರ ಭರ್ಜರಿ ಸಿದ್ಧತೆ ನಡೆದಿದ್ದು, ಸಿದ್ದರಾಮಯ್ಯ-ಡಿಕೆಶಿ ನಡುವೆ ಮೂಲ ಕಾಂಗ್ರೆಸ್,  ವಲಸೆ ಕಾಂಗ್ರೆಸ್ ನಡುವೆ ಕಿತ್ತಾಟ ಶುರುವಾಗಿದೆ.

ವ್ಯಕ್ತಿಪರ ಉತ್ಸವಗಳಿಂದ ಮೂಲ – ವಲಸಿಗರ ನಡುವೆ ಫೈಟ್ ಶುರುವಾಗಿದ್ದು, ಸಿದ್ದರಾಮೋತ್ಸವಕ್ಕೆ ಆರಂಭದಿಂದಲೂ ಪಕ್ಷದಲ್ಲಿ ಅಪಸ್ವರ ಕೇಳಿಬರುತ್ತಿತ್ತು. ಸಿದ್ದರಾಮೋತ್ಸವ ಸಮಾರಂಭಕ್ಕೆ ಬೆಂಬಲಿಗರ ಭರ್ಜರಿ ಸಿದ್ಧತೆ ನಡೆದಿದ್ದು, ಈ ನಡುವೆ ಮೂಲ ಕಾಂಗ್ರೆಸ್ಸಿಗರಿಂದ ಶಿವಕುಮಾರೋತ್ಸವ ಜಪ ಕೇಳಿಬರುತ್ತಿದೆ.

ಇನ್ನು, ಸಿದ್ದರಾಮಯ್ಯ@75 ಅಮೃತ ಮಹೋತ್ಸವ ಪಕ್ಷದ ಕಾರ್ಯಕ್ರಮವೋ..? ಸಿದ್ದರಾಮೋತ್ಸವ ಬಗ್ಗೆ ಸಿದ್ದು ಬೆಂಬಲಿಗರು ಹೇಳೋದೇನು..? ಸಿದ್ದರಾಮೋತ್ಸವ ಪಕ್ಷದ ವೇದಿಕೆಯಲ್ಲೇ ನಡೆಯುತ್ತೆ ಅಂತಾರೆ ಡಿಕೆಶಿ, ಸಿದ್ದರಾಮೋತ್ಸವ ಪಕ್ಷಾತೀತ ಕಾರ್ಯಕ್ರಮ ಎನ್ನುತ್ತಿದ್ದಾರೆ ಭೈರತಿ ಸುರೇಶ್.

RELATED ARTICLES

Related Articles

TRENDING ARTICLES