Monday, May 20, 2024

ಹರ್ಷೋದ್ಘಾರದ ಮಧ್ಯೆ ಪುನೀತ್ ಪುತ್ಥಳಿ ಅನಾವರಣ

ಬಳ್ಳಾರಿ : ಸಾವಿರಾರು ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಹೊಸಪೇಟೆಯಲ್ಲಿ ದಿವಂಗತ ನಟ ಪುನೀತ್ ರಾಜ್​ಕುಮಾರ್ ಅವರ 7.4 ಅಡಿ ಎತ್ತರದ ಪುತ್ಥಳಿಯನ್ನು ನಟ ರಾಘವೇಂದ್ರ ರಾಜಕುಮಾರ್ ಅನಾವರಣಗೊಳಿಸಿದರು.

ಪುನೀತ್ ಅಭಿಮಾನಿಗಳು ಅಪ್ಪು ಭಾವಚಿತ್ರವಿದ್ದ ಟೀ ಶರ್ಟ್, ಧ್ವಜ, ಭಾವಚಿತ್ರ ಹಿಡಿದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಪ್ಪುಮತ್ತೆ ಹುಟ್ಟಿ ಬನ್ನಿ ಎಂಬ ಜಯಘೋಷ ಹಾಕಿದರು. ಇದೇ ವೇಳೆ, ಹೊಸಪೇಟೆ ಕುರಿತು ಪುನೀತ್ ಮಾತನಾಡಿದ ಆಡಿಯೋ, ವಿಡಿಯೋ ಪ್ರಸಾರ ಮಾಡಲಾಯಿತು.

ಇನ್ನು, ಪುತ್ಥಳಿ ಉದ್ಘಾಟನೆ ಮಾಡಿ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್, ಶಾರೀರಿಕವಾಗಿ ಪುನೀತ್ ನಮ್ಮಿಂದ ದೂರವಿರಬಹುದು ಆದರೆ, ಅಂತರಿಕವಾಗಿ ಅಭಿಮಾನಿಗಳ ಹೃದಯದಲ್ಲಿ ಅಪ್ಪು ಅಜರಾಮರ. ದೊಡ್ಡ ಮನೆ ಕುಟುಂಬಕ್ಕೂ ಹೊಸಪೇಟೆಗೂ ಅವಿನಾವಭಾವ ಸಂಬಂಧವಿದೆ. ಪುನೀತ್ ಆದರ್ಶವನ್ನು ಪ್ರತಿಯೊಬ್ಬ ಅಭಿಮಾನಿಗಳು ಪಾಲಿಸಬೇಕು ಎಂದು ಅವರು ಗೊಂಬೆ ಹೇಳುತೈತೆ ಹಾಡನ್ನು ಹಾಡುವ ಮೂಲಕ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದರು. ಈ ವೇಳೆ, ರಾಘವೇಂದ್ರ ರಾಜ್ ಕುಮಾರ್​ ಪತ್ನಿ ಮಂಗಳಾ ಕಣ್ಣೀರು ಹಾಕಿದರು.

RELATED ARTICLES

Related Articles

TRENDING ARTICLES