Thursday, September 19, 2024

ತಿಹಾರದ ರೋಹಿಣಿ ಜೈಲಿನಲ್ಲಿ 200 ಕೋಟಿ ಭ್ರಷ್ಟಾಚಾರ

ನವದೆಹಲಿ: ದೆಹಲಿ ಪೊಲೀಸರು ತಿಹಾರದ ರೋಹಿಣಿ ಜೈಲಿನ 7 ಸಿಬ್ಬಂದಿಗಳನ್ನು ಭ್ರಷ್ಟಾಚಾರದ ಕಾನೂನಿನಡಿ ಬಂಧಿಸಿದ್ದಾರೆ. ಇದಿಷ್ಟೇ ಅಲ್ಲದೆ ಜೈಲಿನ 82 ಸಿಬ್ಬಂದಿಗಳ ವಿರುದ್ಧ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ. ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್​ನಿಗೆ ಸಹಾಯ ಮಾಡಲು ಅವನಿಂದ 200 ಕೋಟಿ ರೂಪಾಯಿಗಳಷ್ಟು ಭಾರಿ ಹಣವನ್ನು ಪಡೆದಿರುವ ಬಗ್ಗೆ ಈಗ ವಿಚಾರಣೆ ನಡೆದಿದೆ.

ದೆಹಲಿ ಪೊಲೀಸ್​ನ ಆರ್ಥಿಕ ಅಪರಾಧ ದಳವು ಈ ಭಾರಿ ಭ್ರಷ್ಟಾಚಾರದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ಪ್ರಿವೆಂಶನ್ ಆಫ್ ಕರಪ್ಷನ್ ಆಕ್ಟ್ ಕಾನೂನಿನಡಿ ಪ್ರಕರಣ ದಾಖಲಿಸಿದ್ದಾರೆ. 2021ರ ಅಗಸ್ಟ್ 7 ರ ಈ ಪ್ರಕರಣ 170/ 384/ 386/ 388/ 419/ 420 ಹೀಗೆ ಹಲವು ಕಲಮುಗಳ ಅಡಿಯಲ್ಲಿ ವಿಚಾರಣೆ ನಡೆದಿದೆ.

RELATED ARTICLES

Related Articles

TRENDING ARTICLES