Monday, February 3, 2025

ಆ ಮೂವರು ಸೇರಿ ಸುಶಾಂತ್​​ನನ್ನು ಕೊಂದಿದ್ದಾರೆ ಅಂದ ಕಂಗನಾ..!

ಮುಂಬೈ : ನಟ ಸುಶಾಂತ್​ ಸಿಂಗ್​ ರಜಪೂತ್​​​ ಸಾವಿಗೆ ಸಂಬಂಧಿಸಿದಂತೆ ನಾನಾ ರೀತಿಯ ಬಿಸಿಬಿ ಚರ್ಚೆಗಳು ನಡೆಯುತ್ತಿವೆ. ಸುಶಾಂತ್ ಸಾವಿನ ಬಳಿಕ ಬಾಲಿವುಡ್​ ಅಕ್ಷರಶಃ ಬೆತ್ತಲಾಗುತ್ತಿದೆ..! ಅಂತೆಯೇ ನಟಿ ಕಂಗನಾ ರಣಾವತ್​​ ಕೆಲವು ಫಿಲ್ಮ್​ ಮೇಕರ್​ಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈಗ ಹೆಸರಾಂತ ಮೂವರು ಫಿಲ್ಮ್​ ಮೇಕರ್​ಗಳು ಸುಶಾಂತ್ ಸಾವಿಗೆ ಕಾರಣ ಅಂತ ಬಹಿರಂಗವಾಗಿ ಆರೋಪ ಮಾಡಿದ್ದಾರೆ.

ಹೌದು, ಕರಣ್ ಜೋಹರ್​, ಆದಿತ್ಯ ಛೋಪ್ರಾ, ಮಹೇಶ್​​ ಭಟ್ ಸೇರಿ ಸುಶಾಂತ್​ನನ್ನು ಕೊಂದಿದ್ದಾರೆ. ಕೆಲವು ಪತ್ರಕರ್ತರು ಹಾಗೂ ಜನ ಕೂಡ ಮಾನಸಿಕವಾಗಿ ಕಿರುಕುಳ ನೀಡಿ ಸುಶಾಂತ್ ಸಾವಿಗೆ ಹೊಣೆಯಾಗಿದ್ದಾರೆಂದು ಕಂಗನಾ ಗಂಭೀರ ಆರೋಪ ಮಾಡಿದ್ದಾರೆ.

“ ಕರಣ್​​ ಜೋಹರ್​, ಆದಿತ್ಯ ಛೋಪ್ರಾ, ಮಹೇಶ್​​ ಭಟ್​, ರಾಜೀವ್​​ ಮಸಂದ್​, ರಕ್ತಹೀರುವ ರಣಹದ್ದುಗಳಂತಿರೋ ಮಾಧ್ಯಮ ಸುಶಾಂತ್​​ನನ್ನು ಬೆದರಿಸಿ, ಶೋಷಿಸಿ, ಕಿರುಕುಳ ನೀಡಿ ಕೊಂದಿವೆ’’ ಎಂದು ಕಿಡಿಕಾರಿದ್ದಾರೆ.  ಅಲ್ಲದೆ ಕರಣ್ ಜೋಹರ್ ತಾವು ದತ್ತುಪಡೆದಿರುವ ಮಕ್ಕಳ ಬಗ್ಗೆ ಬರೆದಿರುವ ಪುಸ್ತಕದ ಕುರಿತು ಕೂಡ ಕಂಗನಾ ಗರಂ ಆಗಿ ಟ್ವೀಟ್​ ಮಾಡಿದ್ದಾರೆ.

RELATED ARTICLES

Related Articles

TRENDING ARTICLES