Monday, May 19, 2025

ಮುಂಜಾಗ್ರತೆ ತಗೋಬೇಕಿತ್ತು, ಡಿಸಿಎಂ ಡಿಕೆಶಿ ನೋಡಿಕೊಳ್ತಾರೆ: ಪರಮೇಶ್ವರ್​

ಬೆಂಗಳೂರು: ಕಳೆದ ರಾತ್ರಿ ಮತ್ತು ಇಂದು ಬೆಳಗಿನ ಜಾವ ಸುರಿದ ಸುರಿದ ಭಾರೀ ಮಳೆಗೆ ರಾಜ್ಯ ರಾಜಧಾನಿ ತತ್ತರಿಸಿದ್ದು. ನಗರದ ಹಲವು ಪ್ರದೇಶಗಳು ನೀರಿನಿಂದ ಜಲಾವೃತವಾಗಿದ್ದು, ಜನರು ಪರದಾಡುವಂತಾಗಿದೆ. ಇನ್ನು ಈ ಕುರಿತು ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದು. ಡಿಸಿಎಂ ಅವರ ಉಸ್ತುವಾರಿ ಇದೇ, ಅವರೇ ನೋಡಿಕೊಳ್ತಾರೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಳೆಯಿಂದ ಸೃಷ್ಟಿಯಾಗಿರುವ ಅವಾಂತರದ ಬಗ್ಗೆ ಮಾತನಾಡಿದ ಪರಮೇಶ್ವರ್​ “ನಗರದ ಹಲವೆಡೆ ಚರಂಡಿಯಲ್ಲಿ ನೀರು ತುಂಬಿ ಸಮಸ್ಯೆ ಆಗಿದೆ. ಮಳೆಯಿಂದ ನೀರು ತುಂಬಿ ಟ್ರಾಫಿಕ್​ ಕೂಡ ಆಗಿದೆ. ಈ ಕುರಿತು ಬಿಬಿಎಂಪಿ ಅವರು ಸ್ಥಳಕ್ಕೆ ಹೋಗಿ ಕ್ರಮ ತೆಗೆದುಕೊಳ್ಳುತ್ತಾರೆ. ಮಳೆಗಾಲದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಡಿಸಿಎಂ ಅವರ ಉಸ್ತುವಾರಿ ಇದೆ ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ:ಭಾರೀ ಮಳೆಗೆ ರಾಜಧಾನಿ ತತ್ತರ: ಸಿಸಿಬಿ ಕಛೇರಿಗೆ ನೀರು ನುಗ್ಗಿ ಅವಾಂತರ, ಈಜೀಪುರದಲ್ಲಿ ಈಜಾಡೋ ಪರಿಸ್ಥಿತಿ

ಮುಂದುವರಿದು ಮಾತನಾಡಿದ ಪರಮೇಶ್ವರ್ “ಬಿಬಿಎಂಪಿ ಜಾಯಿಂಟ್​ ಕಮಿಷನರ್​ ಅವರು ಇದರ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ. ಎರಡು ತಿಂಗಳಿಂದ ಬೇಸಿಗೆ ಇತ್ತು. ಮೇ ಅಥವಾ ಜೂನ್​​ನಲ್ಲಿ ಮಳೆ ಬರುತ್ತೆ, ಈ ಕುರಿತು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಕೆಲಹಂತದಿಂದಲೂ ಸಮಸ್ಐಎ ಆಗುತ್ತದೆ ಎಂದು ಪರಮೇಶ್ವರ್ ಹೇಳಿದರು.

RELATED ARTICLES

Related Articles

TRENDING ARTICLES