Wednesday, May 7, 2025

ಕ್ರಿಕೆಟ್​ ವಿಚಾರಕ್ಕೆ ಜಗಳ: ಎಣ್ಣೆ ಹೊಡೆಯಲು ಕರೆದೊಯ್ದು ಎದೆಗೆ ಚಾಕು ಇರಿದ ದುಷ್ಕರ್ಮಿಗಳು

ಶಿವಮೊಗ್ಗ : ಈ ಕ್ರಿಕೆಟ್ ವಿಚಾರವಾಗಿ ಗಲಾಟೆಯಾಗಿ ಕೊಲೆ ನಡೆದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಆಟದ ನಡುವೆ ಜಗಳ ಉಂಟಾಗಿ ಚಾಕು ಇರಿದು ಓರ್ವ ಯುವಕನನ್ನು ಕೊಲೆ ಮಾಡಿದ್ದಾರೆ. ಕೊಲೆಯಾದ ದುರ್ದೈವಿಯನ್ನು 23 ವರ್ಷದ ಅರುಣ್​ ಎಂದು ಗುರುತಿಸಿದ್ದು. ಮತ್ತೊಬ್ಬ ಯುವಕನಿಗೆ ತೀವ್ರ ಗಾಯವಾಗಿದ್ದು, ಆತನನ್ನು ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲೆನಾಡು ಜಿಲ್ಲೆ, ಶಿವಮೊಗ್ಗದ ಭದ್ರಾವತಿಯಲ್ಲಿ ಆಗ್ಗಾಗ್ಗೆ ರೌಡಿಗಳ ಅಟ್ಟಹಾಸ ಕಂಡು ಬರುತ್ತಲೇ ಇದ್ದು, ಇದೀಗ ಸ್ನೇಹಿತರ ನಡುವೆಯೇ ಜಗಳವಾಗಿ ಮರ್ಡರ್ ನಡೆದು ಹೋಗಿದೆ. ಅಂದಹಾಗೆ, ಈ ಜಗಳದಲ್ಲಿ ಅರುಣ್ (23) ಎಂಬ ಯುವಕನ ಹತ್ಯೆ ಮಾಡದ್ದರೆ. ಸಂಜಯ್​ ಎಂಭಾತನಿಗೆ ತೀವ್ರ ಗಾಯವಾಗಿದೆ. ಇದನ್ನೂ ಓದಿ: ಪಹಲ್ಗಾಮ್​ ದಾಳಿ ಬಗ್ಗೆ ಮೋದಿಗೆ ಗೊತ್ತಿತ್ತು, ಆದರೂ ಅವರು ಪ್ರವಾಸಿಗರ ಪ್ರಾಣ ಉಳಿಸಲಿಲ್ಲ: ಖರ್ಗೆ

ಭದ್ರಾವತಿಯ ಹೊಸಮನೆ ಬಡಾವಣೆಯ ಶಾಲಾ ಮೈದಾನವೊಂದರಲ್ಲಿ ನಿನ್ನೆ ಕ್ರಿಕೆಟ್ ಅಟವಾಡುತ್ತಿದ್ದ ವೇಳೆ ನಡೆದ ಜಗಳ ತಾರಕಕ್ಕೇರಿ ಈ ಕೊಲೆ ನಡೆದು ಹೋಗಿದೆ. ಸಂಜೆ ಕ್ರಿಕೆಟ್ ಮುಗಿಸಿ ಮನೆಗೆ ತೆರಳಿದ್ದ ಅರುಣ್​ಗೆ ಮತ್ತೆ ರಾತ್ರಿ ಕರೆಸಿ, ಅರುಣ್​ ಎದೆಗೆ ಚಾಕು ಇರಿದು ಕೊಲೆ ಮಾಡಿದ್ದಾರೆ. ಅರುಣ್​ನನ್ನು ಉಳಿಸಲು ಬಂದ ಸಂಜಯ್​ ಕೈ ಹಾಗೂ ಬೆನ್ನಗೆ ಚಾಕು ಇರಿದಿದ್ದು, ಆತನನ್ನು ಶಿವಮೊಗ್ಗ ಮೆಗ್ಗಾನ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ :‘ಸೂಸೈಡ್​ ಬಾಂಬರ್​ ಆಗಿ ದೇಶಕ್ಕೆ ಬಲಿದಾನ ನೀಡಲು ನಾನು ಸಿದ್ದ’: ಮತ್ತೆ ಪುನರುಚ್ಚರಿಸಿದ ಜಮೀರ್​

ಇನ್ನು ಮೃತ ಅರುಣ್​ಗೆ ಚಾಕು ಇರಿದಿದ್ದ ಆರೋಪಿಗಳನ್ನು ಅರುಣ್, ಸಚಿನ್, ಸಂಜು, ಪ್ರಜ್ವಲ್ ಎಂದು ಗುರುತಿಸಿದ್ದು. ಕೃತ್ಯದ ಬಳಿಕ ಎಲ್ಲರೂ ಸ್ಥಳಿದಿಂದ ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದು. ಮೃತ ಅರುಣ್​ ಸಚಿನ್​ ಎಂಭಾತನ ಕಪಾಳಕ್ಕೆ ಹೊಡೆದ ಕಾರಣಕ್ಕೆ ಗಲಾಟೆ ನಡೆದಿದೆ ಎಂಬ ಅಂಶ ಬೆಳಕಿಗೆ ಬಂದಿದೆ.

RELATED ARTICLES

Related Articles

TRENDING ARTICLES