Thursday, May 1, 2025

​ಬಸ್​ನಲ್ಲಿ ನಮಾಜ್​ ಮಾಡಿದ್ದಾನೆ, ಇದು ಸಿದ್ದರಾಮಯ್ಯರ ಓಲೈಕೆಯ ಪ್ರತಿಫಲ: ಆರ್​.ಅಶೋಕ್​

ಬೆಂಗಳೂರು : ಪ್ರಯಾಣಿಕರು ಇರುವಾಗಲೇ ಸರ್ಕಾರಿ ಬಸ್ ಅನ್ನು ಮಾರ್ಗ ಮಧ್ಯೆ ನಿಲ್ಲಿಸಿ ಬಸ್​ನಲ್ಲೇ ಚಾಲಕನೋರ್ವ ನಮಾಜ್ ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿತ್ತು. ಈ ಕುರಿತು ವಿಪಕ್ಷ ನಾಯಕ ಆರ್.ಅಶೋಕ್​ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯರ ಓಲೈಕೆಯ ಪರಿಣಾಮವಾಗಿ ಬಸ್​ನಲ್ಲಿ ನಮಾಜ್ ಮಾಡಿದ್ದಾನೆ ಎಂದರು.

ಇದನ್ನೂ ಓದಿ:ಪಾಕ್​ ಪರ ಘೋಷಣೆ ಕೂಗಿದವನ ಹತ್ಯೆ ಪ್ರಕರಣ: ಕರ್ತವ್ಯ ಲೋಪವೆಸಗಿದ ಮೂವರು ಪೊಲೀಸರು ಸಸ್ಪೆಂಡ್​

ಏಪ್ರಿಲ್ 29ರಂದು ಹುಬ್ಬಳ್ಳಿಯಿಂದ ಹಾವೇರಿಗೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಈ ಘಟನೆ ನಡೆದಿದ್ದು, ಬಸ್ ಚಾಲಕ ಬಸ್ ನಲ್ಲೇ ನಮಾಜ್ ಮಾಡುತ್ತಿರುವ ವಿಡಿಯೊವನ್ನು ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರಿಸಿ ಸಾಮಾಜಿಕ ಜಲಾತಾಣಗಳಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ಇದೀಗ ಬಸ್​ನಲ್ಲಿ ನಮಾಜ್​ ಮಾಡಿದ ಚಾಲಕನ ವಿರುದ್ದ ತನಿಖೆಯೂ ಆರಂಭವಾಗಿದೆ. ಇದೀಗ ಈ ಘಟನೆ ಬಗ್ಗೆ ಆರ್.ಅಶೋಕ್​ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಆರ್​.ಅಶೋಕ್​ ‘ಸಿದ್ದರಾಮಯ್ಯ ನಡೆ, ನುಡಿ ನೋಡಿದಾಗ ಹೇಗೆ ಮುಸ್ಲಿಮರ ಓಲೈಕೆ ಮಾಡ್ತಿದ್ದಾರೆ ತಿಳಿಯುತ್ತಿದೆ. ಇದರ ಪ್ರತಿಫಲವಾಗಿ ಬಸ್ಸಿನಲ್ಲಿ ನಮಾಜ್​ ಮಾಡಿದ್ದಾನೆ. ಬಸ್​ ಚಲಿಸುವಾಗಲೇ ನಮಾಜ್​ ಮಾಡಿದ್ದರೆ, ಎಲ್ಲರಿಗೂ ಪುಣ್ಯ ಪ್ರಾಪ್ತಿ ಆಗೋಗ್ತಿತ್ತು. ಸಿದ್ದರಾಮಯ್ಯರ ಮಾತಿ ಕೇಳಿ ವಿಮಾನದಲ್ಲಿ ನಮಾಜ್​ ಮಾಡಿದ್ರೆ ಗೋವಿಂದ. ಇನ್ನೂ ಈ ದಾರಿ ಎಲ್ಲಿಗೆ ಹೋಗಿ ಮುಟ್ಟತ್ತೊ ಗೊತ್ತಿಲ್ಲ.

ಇದನ್ನೂ ಓದಿ :ಜಾತಿ ಗಣತಿಗೆ ಆಗ್ರಹಿಸಿ ಮೋದಿಗೆ ಪತ್ರ ಬರೆದಿದ್ದೆ; ಕೇಂದ್ರ ಸರ್ಕಾರ ಒಳ್ಳೆ ಕೆಲಸ ಮಾಡಿದೆ: ಮಲ್ಲಿಕಾರ್ಜುನ್​ ಖರ್ಗೆ

ಒಬ್ಬ ಮುಖ್ಯಮಂತ್ರಿಯಾಗಿ ಯಾವ ಹಂತದವರೆಗೂ ರಾಜಿನಾಮೇ ಮಾಡಬಹುದು. ಕೂಡಲೇ ನಮಾಜ್​ ಮಾಡಿದವನನ್ನು ಕೆಲಸದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಇಂತಹ ಘಟನೆಗಳು ಅತಿರೇಕಕ್ಕೆ ಹೋಗುತ್ತವೆ. ಸರ್ಕಾರದ ಬಗ್ಗೆ ರಾಜ್ಯದ ಜನರು ಯೋಚನೆ ಮಾಡುವಂತಾಗಿದೆ. ಜನ ಸರ್ಕಾರದ ವಿರುದ್ದ ಹಿಡಿಶಾಪ ಹಾಕುತ್ತಿದೆ.

RELATED ARTICLES

Related Articles

TRENDING ARTICLES