ಬೆಂಗಳೂರು : ಪಹಲ್ಗಾಮ್ ದಾಳಿಯ ಕುರಿತು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕ್ರಮದ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದು. ಬಿಜೆಪಿಯವರ ಆಡಳಿತದಲ್ಲೇ ಹಿಂದೂಗಳು ಸುರಕ್ಷಿತವಾಗಿಲ್ಲ. ಪ್ರಧಾನ ಮಂತ್ರಿಗಳು ಕಾಶ್ಮೀರಕ್ಕೆ ಹೋಗದೆ, ಬಿಹಾರಕ್ಕೆ ಹೋಗಿ ಭಾಷಣ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಸಂತೋಷ್ ಲಾಡ್ ‘ಸಿಂಧೂ ನದಿ ನೀರು ಒಪ್ಪಂದ ಅಮಾನತು ಗೊಳಿಸಿದ್ದಾರೆ. ಆದರೆ ನೀರು ನಿಲ್ಲಿಸಲು ಸಾಧ್ಯ ಇದ್ಯಾ? ಇದರ ಬಗ್ಗೆ ಪರಾಮರ್ಶೆ ಆಗಿದ್ಯಾ? ಸರ್ಕಾರ ನಿರ್ಣಯ ತೆಗೆದುಕೊಳ್ಳುವ ಮೊದಲು ಮಾಧ್ಯಮಕ್ಕೆ ಬಿಡುತ್ತಾರೆ. ಈ ವಿಷಯವನ್ನು ದಾರಿ ತಪ್ಪಿಸಲು ಇಂತಹ ವಿಚಾರ ಚರ್ಚೆಗೆ ಬರುತ್ತಿದೆ. ಇವರ ಆಡಳಿತದಲ್ಲಿ ಹಿಂದೂಗಳು ಸುರಕ್ಷಿತರಾಗಿಲ್ಲ.
ಇದನ್ನೂ ಓದಿ :ಲಿವ್ ಇನ್ನಲ್ಲಿದ್ದ ಸಂಗಾತಿಯನ್ನು ಕೊಂದು ಮಂಚದ ಬಾಕ್ಸ್ನಲ್ಲಿ ಬಚ್ಚಿಟ್ಟ ಖದೀಮ
ಪ್ರಧಾನಿಗಳು ಕಾಶ್ಮೀರಕ್ಕೆ ಹೋಗಿ ಪ್ರೆಸ್ ಮೀಟ್ ಮಾಡ್ಲಿಲ್ಲ, ಆದರೆ ಬಿಹಾರಕ್ಕೆ ಹೋಗಿ ಭಾಷಣ ಮಾಡಿದ್ರು. ಟೆರರಿಸ್ಟ್ಗಳ ಮನೆ ಧ್ವಂಸ ಮಾಡಿದ್ದಾರೆ ಅಂತ ಸುದ್ದಿಯಾಗಿದೆ, ಹಾಗಾದರೇ ಮೊದಲು ಟೆರರಿಸ್ಟ್ಗಳ ಮನೆ ಇದ್ದ ಬಗ್ಗೆ ಗೊತ್ತಿರಲಿಲ್ಲವೇ. ಆ ಟೆಕ್ನಾಲಜಿ ಈ ಟೆಕ್ನಾಲಜಿ ಅಂತ ಮೋದಿ ಮಾತನಾಡುತ್ತಾರೆ. ಎಐ ಟೆಕ್ನಾಲಜಿ ಅಂತ ಹೇಳ್ತಾರೆ. ಆದರೆ ಅಲ್ಲಿ ಒಂದು ಡ್ರೋನ್ ವ್ಯವಸ್ಥೆ ಇಲ್ಲ. ಡ್ರೋನ್ ಮೂಲಕ ಬೀಜ ಹಾಕಿ ಮರ ಬೆಳೆಸ್ತೇವೆ ಅಂತಾರೆ. ಆದ್ರೆ ಅಲ್ಲಿ ಯಾವ ರೀತಿ ಸೆಕ್ಯುರಿಟಿ ಇದೆ ಅನ್ನೋದರ ಬಗ್ಗೆ ಚರ್ಚೆ ಆಗ್ತಿದೆ. ಘಟನೆ ನಡೆದ 2 ಗಂಟೆಗಳ ಬಳಿಕ ಆರ್ಮಿ ಸ್ಥಳಕ್ಕೆ ಹೋಗಿದೆ. ಅಷ್ಟು ಸಮಯ ಏಕಾಯಿತು ಎಂದು ಹೇಳಿದರು.
ಇನ್ನು ಸಚಿವ ಆರ್,ಬಿ ತಿಮ್ಮಾಪುರ ಅವರು ಹಿಂದುಗಳನ್ನು ಹುಡುಕಿ ಕೊಂದಿಲ್ಲ ಎಂದ ವಿಚಾರದ ಕುರಿತು ಮಾತನಾಡಿದ ಸಂತೋಷ ಲಾಡ್ ‘ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಪತ್ನಿ ನೀಡಿದ ಹೇಳಿಕೆಯನ್ನ ಅಲ್ಲೆಗಳೆಯೋದಕ್ಕೆ ಹಾಗಲ್ಲ. ಆದರೆ ಅಲ್ಲಿದ್ದ 90% ಜನರು ಹಾಗೇ ನಡೆದಿಲ್ಲ ಅಂತ ಹೇಳ್ತಾರೆ. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಹೊಡೆದಿದ್ದಾರೆ ಅನ್ನೋದು ಸುಳ್ಳು ಹೇಳಿದ್ರೆ ಅದು ಸರಿಯಲ್ಲ.
ಇದನ್ನೂ ಓದಿ :ಭಾರತದಲ್ಲಿ ಪಾಕಿಸ್ತಾನದ 16 ಪ್ರಮುಖ ಯೂಟ್ಯೂಬ್ ಚಾನೆಲ್ಗಳು ಬ್ಯಾನ್
ಆದರೆ ಬಿಜೆಪಿಯವರು ಪುಲ್ವಾಮಾ ಅಟ್ಯಾಕ್ ಬಗ್ಗೆ ಯಾರು ಮಾತಾಡಲ್ಲ. ಬಿಹಾರ ಚುನಾವಣೆಯಲ್ಲಿ ಇದೇ ವಿಚಾರ ಚರ್ಚೆ ಆಗ್ತಿದೆ. ಬಿಹಾರ ಚುನಾವಣೆ ಇದರ ಮೇಲೆ ಮಾಡೋಕೆ ಹೊರಟಿದ್ದಾರೆ. ಕಾಶ್ಮೀರದಲ್ಲಿ ಟ್ರೇನ್ ಟಿಕೆಟ್ ಮೂರು ಪಟ್ಟು ಹೆಚ್ಚು ಮಾಡಿದ್ದಾರೆ. ಫ್ರೀ ಟಿಕೆಟ್ ಕೊಡೋದು ಬಿಡಿ, ಸೆಂಟ್ರಲ್ ನವರು ಪ್ರೈಸ್ ಹೆಚ್ಚಳ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಜನರ ದುಡ್ಡು ಲೂಟಿ ಹೊಡೆದಿದ್ದಾರೆ ಎಂದು ಸಂತೋಷ್ ಲಾಡ್ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.