ದೆಹಲಿ : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರ ದಾಳಿಯನ್ನು ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಕೇಕ್ ತಿಂದು ಸಂಭ್ರಮಿಸಿತೇ ಎನ್ನುವ ಅನುಮಾನ ಎಲ್ಲರನ್ನು ಕಾಡಿದೆ.
ಇದಕ್ಕೆ ಪುಷ್ಟಿ ಕೊಡುವಂತೆ ದೆಹಲಿಯಲ್ಲಿರುವ ಪಾಕ್ ಹೈ ಕಮಿಷನ್ ಕಛೇರಿಯಲ್ಲಿ ಉದ್ಯೋಗಿಯೊಬ್ಬ ಕೇಕ್ ತೆಗೆದುಕೊಂಡು ಹೋಗಿರುವ ದೃಷ್ಯ ವೈರಲ್ ಆಗಿದೆ. ಈಗಾಗಲೇ ಭಾರತದಲ್ಲಿರುವ ಪಾಕ್ ಹೈ ಕಮಿಷನ್ ಕಛೇರಿಯನ್ನು ಸ್ಥಗಿತಗೊಳಿಸಲು ಭಾರತ ಸರ್ಕಾರ ಆದೇಶ ಹೊರಡಿಸಿದ್ದು. ಪಾಕಿಸ್ತಾನದ 25 ರಾಯಭಾರಿಗಳನ್ನು ಭಾರತದಿಂದ ಉಚ್ಚಾಟಿಸಿದೆ. ಇದರ ನಡುವೆ ಪಾಕ್ನ ಕುನ್ನಿಗಳು ಭಾರತದ ಮೇಲೆ ನಡೆದಿರುವ ದಾಳಿಯನ್ನು ಕೇಕ್ ಕತ್ತರಿಸುವ ಮೂಕ ಸಂಭ್ರಮಿಸಿದ್ದಾರೆ.ಇದನ್ನೂ ಓದಿ :ಅಭಿವೃದ್ದಿ ಯೋಜನೆಗಳ ಉದ್ಘಾಟನೆಗೆ ಪ್ರಧಾನಿ ಮೋದಿ ಬಿಹಾರಕ್ಕೆ ಭೇಟಿ: ವಿಪಕ್ಷಗಳಿಂದ ಟೀಕೆ
ವ್ಯಕ್ತಿಯೋರ್ವ ಕೇಕ್ ಬಾಕ್ಸ್ ತೆಗೆದುಕೊಂಡು ಹೋಗುವುದನ್ನು ಕಂಡು ಮಾಧ್ಯಮದವರು ಆತನಿಗೆ ಪ್ರಶ್ನಿಸಿದ್ದು. ಈ ಪ್ರಶ್ನೆಗಳಿಗೆ ಆತ ಉತ್ತರಿಸದೆ ಹೋಗಿದ್ದಾನೆ. ಆದ್ದರಿಂದ ಪಹಲ್ಗಾಮ್ ದಾಳಿಯ ಬಗ್ಗೆ ಪಾಕಿಸ್ತಾನ ಸಂತೋಷಗೊಂಡಿದ್ದು, ಅದನ್ನು ಸಂಭ್ರಮಿಸಲು ಭಾರತದಲ್ಲೇ ಕೇಕ್ ಕತ್ತರಿಸುತ್ತಿದೆಯೇ ಎನ್ನುವ ಊಹಾಪೋಹಗಳು ಎದ್ದಿವೆ. ಸತ್ಯ ಏನೇ ಇರಲಿ, ಪಾಕಿಸ್ತಾನಿ ಉದ್ಯೋಗಿ ಪ್ರತಿಕ್ರಿಯಿಸಲು ವಿಫಲರಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ :ಸುರಕ್ಷಿತವಾಗಿ ಕರುನಾಡಿಗೆ ಬಂದು ತಲುಪಿದ 178 ಕನ್ನಡಿಗರು..!
ಜೊತೆಗೆ ಪಾಕಿಸ್ತಾನದ ರಾಯಭಾರ ಕಛೇರಿಗೆ ನೀಡಿದ್ದ ಭದ್ರತೆಯನ್ನ ಭಾರತ ಸರ್ಕಾರ ವಾಪಾಸ್ ಪಡೆದಿದ್ದು. ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಪಾಕ್ನ ನಾಗರಿಕರಿಗೆ ದೇಶ ತೊರೆಯಲು 48 ಗಂಟೆಗಳ ಗಡುವು ನೀಡಲಾಗಿದೆ. ಅಟಾರಿ-ವಾಘಾ ಗಡಿಯನ್ನು ಬಂದ್ ಮಾಡಲಾಗಿದೆ. ಜೊತೆಗ ಪಾಕಿಸ್ತಾನದ ಇಸ್ಲಾಮಾಭಾದ್ನಲ್ಲಿರುವ ಭಾರತದ ರಾಯಭಾರಿಗಳನ್ನು ವಾಪಾಸ್ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.