ಗುರುಗ್ರಾಮ್: ಜಮ್ಮು ಕಾಶ್ಮೀರದಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಹನಿಮೂನ್ಗೆ ಎಂದು ಬಂದಿದ್ದ ನೌಕಾ ಅಧಿಕಾರಿ ವಿನಯ್ ನರ್ವಾಲ್ ಸಾವನ್ನಪ್ಪಿದ್ದರು. ಇದೀಗ ಇವರ ಬಗ್ಗೆ ಮತ್ತೊಂದು ಮಾಹಿತಿ ತಿಳಿದು ಬಂದಿದ್ದು. ವಿನಯ್ ತಮ್ಮ ಪತ್ನಿಯೊಂದಿಗೆ ಯೂರೋಪ್ಗೆ ಭೇಟಿ ನೀಡಲು ವೀಸಾಗೆ ಅರ್ಜಿ ಸಲ್ಲಿಸಿದ್ದರು. ಆದರೆ ಸಮಯಕ್ಕೆ ಸರಿಯಾಗಿ ವೀಸಾ ದೊರೆಯದ ಕಾರಣ ಕೊನೆ ಕ್ಷಣದಲ್ಲಿ ಪತ್ನಿಯೊಂದಿಗೆ ಜಮ್ಮು ಕಾಶ್ಮೀರಕ್ಕೆ ಬಂದಿದ್ದರು. ಇದೀಗ ಈ ನಿರ್ಧಾರವೇ ಅವರ ಸಾವಿಗೆ ಮತ್ತೊಂದು ಕಾರಣವಾಗಿದೆ.
ಮೂಲತಃ ಹರಿಯಾಣದ ಕರ್ನಾಲ್ನ ಭುಸ್ಲಿ ಗ್ರಾಮದವರಾದ ವಿನಯ್. ಮೂರು ವರ್ಷಗಳಿಂದ ಕೊಚ್ಚಿಯ ನೌಕನೆಲೆಯಲ್ಲಿ ಲೆಫ್ಟಿನೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 40 ದಿನಗಳ ರಜೆ ಮೇಲೆ ಮನೆಗೆ ಬಂದಿದ್ದ ವಿನಯ್ ಕಳೆದ ಏಪ್ರೀಲ್ 16ರಂದು ಗುರುಗ್ರಾಮ್ನ ಹಿಮಾಂಶಿ ಎಂಬುವವರ ಜೊತೆ ವಿವಾಹವಾಗಿದ್ದರು. ವಿವಾಹದ ನಂತರ ಮಸೂರಿಯಲ್ಲಿ ಏಪ್ರೀಲ್ 19ರಂದು ಆರತಕ್ಷತೆ ನಡೆದಿತ್ತು. ದಂಪತಿಗಳಿಬ್ಬರು ಹನಿಮೂನ್ಗೆ ಯೂರೋಪ್ಗೆ ಹೋಗಲು ಯೋಜನೆ ರೂಪಿಸಿದ್ದರು. ಇದನ್ನೂ ಓದಿ:ಭಾರತ ದಾಳಿ ಮಾಡಿದರೆ, ಅದಕ್ಕೆ ಪ್ರತಿಕಾರ ತೀರಿಸಿಕೊಳ್ಳುತ್ತೇವೆ: ಮೊಂಡುತನ ಪ್ರದರ್ಶಸಿಸದ ಪಾಕ್ ಸಚಿವೆ
ಆದರೆ ಇವರು ಸಲ್ಲಿಸಿದ್ದ ವೀಸಾ ಅರ್ಜಿ ರದ್ದಾದ ಕಾರಣ, ಭಾರತದ ಸ್ವಿಜರ್ಲ್ಯಾಂಡ್ ಎಂದೇ ಖ್ಯಾತವಾಗಿರುವ ಪಹಲ್ಗಾಮ್ಗೆ ಹೋಗಲು ದಂಪತಿಗಳು ಸಿದ್ದವಾಗಿದ್ದರು. ಸಿದ್ದತೆಯಂತೆ ಏಪ್ರೀಲ್ 21ರಂದು ಜಮ್ಮು ಕಾಶ್ಮಿರಕ್ಕೆ ತೆರಳಿದ್ದ ಹಿಮಾಂಶಿ ಮತ್ತು ವಿನಯ್ ಹೋಟೆಲ್ ಒಂದರಲ್ಲಿ ತಂಗಿದ್ದರು. ಆದರೆ ವಿಧಿಯಾಟವೆಂಬಂತೆ ಏಪ್ರೀಲ್ 22ರಂದು ಉಗ್ರರು ಈ ಪ್ರದೇಶದ ಮೇಲೆ ದಾಳಿ ನಡೆಸಿದ್ದು. ಉಗ್ರರ ಗುಂಡಿಗೆ ವಿನಯ್ ಅಸುನೀಗಿದ್ದಾರೆ.
ಮೇ. 01ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ವಿನಯ್
ಇದನ್ನೂ ಓದಿ :Pahalgam Terror Attack : ಅಮಿತ್ ಶಾ, ಮೋದಿ ಕಡೆ ಬೊಟ್ಟು ಮಾಡಿದ ಪ್ರಿಯಾಂಕ್ ಖರ್ಗೆ
ಇದೇ ಮೇ.01ಕ್ಕೆ ವಿನಯ್ 27ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಇದಕ್ಕಾಗಿ ಮನೆಯಲ್ಲಿ ಭರ್ಜರಿ ಸಿದ್ದತೆಗಳು ಆರಂಭವಾಗಿದ್ದವು. ಹುಟ್ಟುಹಬ್ಬದ ನಂತರ ಮೇ.03ರಂದು ವಿನಯ್ ಹಿಮಾಂಶಿ ಅವರ ಜೊತೆಗೆ ಕೊಚ್ಚಿಗೆ ತೆರಳಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.