Tuesday, April 22, 2025

ಇಂಧನ ಇಲಾಖೆಯಲ್ಲಿ ಸಾವಿರಾರು ಕೋಟಿ ಹಗರಣ: ಸಚಿವ ಜಾರ್ಜ್ ವಿರುದ್ದ ಲೋಕಾಯುಕ್ತಗೆ ದೂರು

ಬೆಂಗಳೂರು: ಪವರ್​ ಟಿವಿ ವಿಸ್ತೃತವಾಗಿ ಭಿತ್ತರಿಸಿದ್ದ ಸ್ಮಾರ್ಟ್​ ಮೀಟರ್​ ಹಗರಣ ಸಂಬಂಧ ರಾಜ್ಯ ಬಿಜೆಪಿ ಕೆ.ಜೆ ಜಾರ್ಜ ವಿರುದ್ದ ತನಿಖೆಗೆ ಆಗ್ರಹಿಸಿ ಲೋಕಾಯುಕ್ತಗೆ ದೂರು ನೀಡಿದೆ. ಇಂಧನ ಇಲಾಖೆಯಲ್ಲಿ ಸಾವಿರಾರು ಕೋಟಿ ಹಗರಣವಾಗಿದ್ದು. ಈ ಕುರಿತಾದ ತನಿಖಾ ವರದಿಯನ್ನು ಪವರ್​ ಟಿವಿ ಸುದೀರ್ಘವಾಗಿ ಭಿತ್ತರಿಸಿತ್ತು.

ಶಾಸಕರಾದ ಅಶ್ವಥ್ ನಾರಾಯಣ್, ಎಸ್.ಆರ್.ವಿಶ್ವನಾಥ್, ಧೀರಜ್ ಮುನಿರಾಜು ನೇತೃತ್ವದ ನಿಯೋಗದಿಂದ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ, ದೂರು ಸಲ್ಲಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೂರು ನೀಡಿದ್ದು, ಇಂಧನ ಸಚಿವ ಕೆ.ಜೆ.ಜಾರ್ಜ್, ಗೌರವ್ ಗುಪ್ತಾ, ಟೆಕ್ನಿಕಲ್ ಡೈರೆಕ್ಟರ್ ಮಹಾಂತೇಶ್ & ಬಾಲಾಜಿ ಮೇಲೆ ದೂರು ನೀಡಲಾಗಿದೆ.

ಇದನ್ನೂ ಓದಿ :ಬಿಜೆಪಿಯಲ್ಲಿ ಮುಂದುವರಿದ ಒಳಜಗಳ: ಒಗ್ಗಟ್ಟಿನ ಮಂತ್ರ ಜಪಿಸಿದ ವಿಜಯೇಂದ್ರ

ಶಾಸಕ ಅಶ್ವಥ್​ ನಾರಾಯಣ..!

ಈ ಕುರಿತು ಶಾಸಕ ಸಿಎನ್​ ಅಶ್ವಥ್​ ನಾರಾಯಣ್​ ಹೇಳಿಕೆ ನೀಡಿದ್ದು. “ಇಂಧನ ಇಲಾಖೆ ಸಚಿವರು, ಪ್ರಧಾನ ಕಾರ್ಯದರ್ಶಿ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೂರು‌ ನೀಡಿದೇವೆ. ಇಂಧನ ಸಚಿವ ಕೆಜೆ‌ ಜಾರ್ಜ್ ಆರೋಪಿ ನಂಬರ್ 1, ಗೌರವ್ ಗುಪ್ತಾ ಆರೋಪಿ 2, ಟೆಕ್ನಿಕಲ್ ಡೈರೆಕ್ಟರ್ ಮಹಂತೇಶ್, & ಬಾಲಾಜಿ ಮೇಲೆ ದೂರು ಸಲ್ಲಿಸಿದ್ದೇವೆ. ಕಂಬ ತಯಾರಿಸುವ ರಾಜಶ್ರೀ ಕಂಪನಿಗೆ ಸ್ಮಾರ್ಟ್​ ಮೀಟರ್​ ಅಳವಡಿಕೆಗೆ ಟೆಂಡರ್​ ನೀಡಿದ್ದಾರೆ.

ಈ ಟೆಂಡರ್​ನಲ್ಲಿ ನಿಯಮಗಳ ಉಲ್ಲಂಘನೆ ಆಗಿದೆ. ಒಂದು ಬ್ಲಾಕ್​ ಲಿಸ್ಟ್​ ಕಂಪನಿ ಟೆಂಡರ್​ಗೆ ನೀಡಿದ್ದಾರೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ. ಭ್ರಷ್ಟಚಾರದ ವಿರುದ್ದ ನಾವು ಸದಾ ಯುದ್ದ ಮಾಡಿದ್ದೇವೆ. ಸಚಿವ ಜಾರ್ಜ್​ ತಮ್ಮ ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES