Monday, April 21, 2025

ಅತ್ಯಾಚಾರ ಆರೋಪಿಯ ಮೃತದೇಹದ ಅಂತ್ಯಸಂಸ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು : ಹುಬ್ಬಳ್ಳಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಯ ಶವದ ಅಂತ್ಯಸಂಸ್ಕಾರದ ಕುರಿತು ರಾಜ್ಯ ಹೈಕೋರ್ಟ್​ ಸೂಚನೆ ನೀಡಿದ್ದು. ಆರೋಪಿಯ ಶವದ ಮರಣೋತ್ತರ ಪರೀಕ್ಷೆ ನಡೆಸಿ. ಆತನ ಶವವನ್ನು ಹೂಳುವಂತೆ ಸೂಚನೆ ನೀಡಿದೆ.

ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸೆಗಿ, ಕೊಲೆ ಮಾಡಿದ್ದ ಆರೋಪಿ ರಿತೇಶ್​ ಕುಮಾರ್​ ಪೊಲೀಸರ್​ ಎನ್​ಕೌಂಟರ್​ಗೆ ಬಲಿಯಾಗಿದ್ದು. ಆತನ ಶವವನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಈತ ಬಿಹಾರ್​ ಮೂಲದವನೆಂದು ತಿಳಿದು ಬಂದಿದ್ದರು. ಈತನ ಸಂಬಂಧಿಗಳ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಲಭಿಸಿಲ್ಲ.ಈ ಕುರಿತು ಹೈಕೋಟ್​ ಸೂಚನೆ ನೀಡಿದ್ದು. ಆರೋಪಿ ರಿತೇಶ್​ ಕುಮಾರ್​ನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ. ಅವರ ವಿಡಿಯೋ ಚಿತ್ರಕರಿಸಬೇಕೂ. ರಿತೇಶ್​ ಮೃತದೇಹದ ಮಾದರಿಯನ್ನು ಸಂಗ್ರಹಿಸಿದಬೇಕೂ ಎಂದು ಆದೇಶಿಸಿದೆ.

ಇದನ್ನೂ ಓದಿ :ರೆಸಾರ್ಟ್​ಗೆ ಬಂದು ದಾಂಧಲೆ; ಕ್ಷುಲಕ ವಿಷಯಕ್ಕೆ ಬ್ಯಾಟ್​​ ಹಿಡಿದು ಫೈಟ್​ ಮಾಡಿದ ಕುಟುಂಬ

ಪ್ರಕರಣ ತನಿಖೆಗೆ ಸಿಐಡಿ ಎಂಟ್ರಿ..!

ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಗೆ ಸಿಐಡಿ ಎಂಟ್ರಿ ಕೊಟ್ಟಿದ್ದು. ಸಿಐಡಿ ತಂಡ ಹುಬ್ಬಳ್ಳಿಗೆ ಆಗಮಿಸಿದೆ. ಎಸ್​ಪೊ ವೆಂಕಟೇಶ್​ ಸೇರಿದಂತೆ ಮೂರು ಅಧಿಕಾರಿಗಳ ನೇತೃತ್ವದ ತಂಡ ಹುಬ್ಬಳ್ಳಿ ಶವಗಾರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES