Wednesday, April 16, 2025

ಕಾಂತರಾಜುನ ಮನೆಗೆ ಕರೆಸಿ ಸಿಎಂ ಡಿಕ್ಟೇಟ್ ಮಾಡಿ ಜಾತಿಗಣತಿ ವರದಿ ಬರೆಸಿದ್ದಾರೆ: ಆರ್.ಅಶೋಕ್

ಬೆಂಗಳೂರು : ಜಾತಿಗಣತಿ ವರದಿ ವರದಿ ವಿಚಾರವಾಗಿ ವಿಪಕ್ಷ ನಾಯಕ ಆರ್​.ಅಶೋಕ್​ ಸಿದ್ದರಾಮಯ್ಯರ ಮೇಲೆ ವಾಗ್ದಾಳಿ ನಡೆಸಿದ್ದು. ಸಿದ್ದರಾಮಯ್ಯ ಅCasrವರು ಕಾಂತರಾಜುನಾ ಮನೆಗೆ ಕರೆಸಿಕೊಂಡು ಡಿಕ್ಟೆಶನ್ ಮಾಡಿ ವರದಿ ಬರೆಸಿದ್ದಾರೆ. ಕಾಂತರಾಜು ಅರ್ಧಕ್ಕೆ ಬಿಟ್ಟು ಹೋಗಿದ್ದ. ಆದರೆ ಈಗ ವರದಿ ನೀಡಿದ್ದಾರೆ ಎಂದು ಹೇಳಿದರು.

ಜಾತಿ ಜನಗಣತಿ ವಿಚಾರ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದ್ದು. ಈ ಕುರಿತು ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕ ಆರ್.ಅಶೋಕ್​ ಸಿದ್ದರಾಮಯ್ಯರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಅಶೋಕ್​ ‘ಜಾತಿ ಜನಗಣತಿಯಲ್ಲಿ ರಾಜ್ಯದಲ್ಲೇ ಮುಸ್ಲಿಂರೆ ನಂಬರ್ ಒನ್ ಎಂದು ವರದಿ ನೀಡಲಾಗಿದೆ. ಇದು ಕರ್ನಾಟಕದಲ್ಲಿ ಮಿನಿ ಪಾಕಿಸ್ತಾನಕ್ಕೆ ದಾರಿ ಮಾಡಿದೆ.  ಮುಸ್ಲಿಂರಿಗೆ ಗುತ್ತಿಗೆ ಮೀಸಲಾತಿ ನೀಡಿದಾಗಲೇ ಗೊತ್ತಾಗಬೇಕಿತ್ತು. ಇವರು ಲಿಂಗಾಯತರಿಗೆ ಪಂಗನಾಮ ಹಾಕಿದ್ರು.ಗೌಡರಿಗೆ, ದಲಿತರಿಗೆ ನಾಮ ಹಾಕಿದ್ದಾರೆ.

ಇದನ್ನೂ ಓದಿ :ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗದ ಪತ್ನಿ, ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಕಿರಾತಕ

ಲಿಂಗಾಯತರನ್ನು ಭಾಗ ಭಾಗ ಮಾಡಿದ್ದಾರೆ. ಆದರೆ ಮುಸ್ಲಿಂಮರಲ್ಲೂ ಬೇರೆ ಬೇರೆ ಜಾತಿ ಇದೆ. ಅವರನ್ನು ಯಾಕೆ ಡಿವೈಡ್​ ಮಾಡಿಲ್ಲ. ನಿಮಗೆ ಬೇಕಾದವರನ್ನು ಒಟ್ಟಿಗೆ ಇಟ್ಟುಕೊಂಡು, ಬೇಡದವರನ್ನು ಒಡೆಯುವ ಕೆಲಸ ಮಾಡುತ್ತಿದ್ದೀರ ಎಂದು ಆರ್. ಅಶೋಕ್​ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES