Monday, February 24, 2025

ವಿಜಯೇಂದ್ರ-ಪ್ರತಾಪ್‌ ಸಿಂಹ ಮುಖಾಮುಖಿ: ವೈಮನಸ್ಸು ಮರೆತರೆ ಭಿನ್ನರು !

ಮೈಸೂರು : ಉದಯಗಿರಿಯಲ್ಲಿ ನಡೆದ ಧಾಂದಲೆಯನ್ನು ವಿರೋಧಿಸಿ ಇಂದು ಮೈಸೂರಿನಲ್ಲಿ ಹಿಂದೂ ಸಂಘಟನೆಗಳು ಜನಜಾಗೃತಿ ಜಾಥಾ ನಡೆಸುತ್ತಿವೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ಮತ್ತು ಮಾಜಿ ಸಂಸದ ಪ್ರತಾಪ್​ ಸಿಂಹ ಮುಖಾಮುಖಿಯಾಗಿದ್ದಾರೆ.

ಹೌದು.. ಬಿಜೆಪಿಯಲ್ಲಿ ಬಣ ಬಡಿದಾಟ ಎಲ್ಲರಿಗೂ ಹೊತ್ತಿರುವ ವಿಚಾರವೇ ಆಗಿದೆ. ಯತ್ನಾಳ್​ ಬಣ ಮತ್ತು ವಿಜಯೇಂದ್ರ ಬಣ ಎರಡು ಬಣಗಳಾಗಿ ಬಡಿದಾಡುತ್ತಿದ್ದು. ಮಾಜಿ ಸಂಸದ ಪ್ರತಾಪ್​ ಸಿಂಹ ಹೆಚ್ಚಾಗಿ ಯತ್ನಾಳ್​ ಜೊತೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇಂದು ಮೈಸೂರಿನಲ್ಲಿ ನಡೆಯುತ್ತಿರುವ ಜನ ಜಾಗೃತಿ ಜಾಥದಲ್ಲಿ ವಿಜಯೇಂದ್ರ ಮತ್ತು ಪ್ರತಾಪ್​ ಸಿಂಹ ಇಬ್ಬರು ಮುಖಾಮುಖಿಯಾಗಿದ್ದಾರೆ.

ಇದನ್ನೂ ಓದಿ :‘ಭಾರತ ಸೋಲುತ್ತೆ’ ಎಂದು ಬುರುಡೆ ಬಿಟ್ಟಿದ್ದ ಐಐಟಿ ಬಾಬನ ಭವಿಷ್ಯ ಸುಳ್ಳು

ಪರಸ್ಪರ ಕೈ ಕುಲುಕಿ ಮಾತನಾಡಿರುವ ಉಭಯ ನಾಯಕರು. ಲವಲವಿಕೆಯಿಂದ ಮಾತನಾಡಿದ್ದಾರೆ. ಪ್ರತಾಪ್​ ಸಿಂಹ ಯತ್ನಾಳ್​ ಬಣದೊಂದಿಗೆ ಗುರುತಿಸಿಕೊಂಡಿದ್ದರು ಹಾಗೂ ಅನೇಕ ಬಾರಿ ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದ್ದರು. ಆದರೆ ಈ ಬೆಳವಣಿಗೆ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದ್ದು. ಬಿಜೆಪಿ ಹೈಕಮಾಂಡ್​ ಏನಾದರೂ ಭಿನ್ನರು ಮತ್ತು ವಿಜಯೇಂದ್ರರ ನಡುವೆ ರಾಜಿ ಮಾಡಿಸಿದೆಯಾ ಎಂಬ ಕುತೂಹಲಕ್ಕೆ ಕಾರಣವಾಗಿದೆ.

 

RELATED ARTICLES

Related Articles

TRENDING ARTICLES