ಬೆಂಗಳೂರು : ಮೈಸೂರು ಉದಯಗಿರಿ ದಾಂಧಲೆಯ ಕುರಿತು ಪ್ರತಾಪ್ ಸಿಂಹ ಹೇಳಿಕೆ ಕುರಿತು ಲೇವಡಿ ಮಾಡಿದ ಶಾಸಕ ಪ್ರದೀಪ್ ಈಶ್ವರ್. ಪ್ರತಾಪ್ ಸಿಂಹ ಒಬ್ಬ ಲಜ್ಜೆಗೆಟ್ಟ ಮಾಜಿ ಸಂಸದ, ಆತನನ್ನು ಇನ್ನು ಯಾಕೆ ಒದ್ದು ಒಳಗೆ ಹಾಕಿಲ್ವೋ ಗೊತ್ತಿಲ್ಲಾ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಂ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ನೀಡಿದ ಹೇಳಿಕೆ ಕುರಿತು ಪ್ರದೀಪ್ ಈಶ್ವರ್ ಆಕ್ರೋಶ ವ್ಯಕ್ತಪಡಿಸಿದ್ದು. ‘ಪ್ರತಾಪ್ ಸಿಂಹ ಒಬ್ಬ ಲಜ್ಜೆಗೆಟ್ಟ ಮಾಜಿ ಸಂಸದ. ಸಂಸತ್ ಒಳಗೆ ಹೊಗೆ ಬಾಂಬ್ ಹಾಕಲು ಪಾಸ್ ಕೊಟ್ಟ ನೀವೆಂತ ಅಯೋಗ್ಯ. ಪರಮೇಶ್ವರ್ ಬಗ್ಗೆ ಮಾತನಾಡುವಾಗ ಮಿತಿ ಇರಲಿ. ನಮ್ಮ ಧರ್ಮದ ಬಗ್ಗೆ ಮಾತನಾಡಿದರೆ ನಮಗೆ ಹೇಗೆ ರಕ್ತ ಕುದಿಯುತ್ತದೆಯೋ, ಅದೇ ರೀತಿ ಅವರ ಧರ್ಮದ ಬಗ್ಗೆ ಮಾತನಾಡಿದರೆ ಅವರು ಸುಮ್ನೇ ಇರಲ್ಲ.
ಇದನ್ನೂ ಓದಿ :ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತೆ, ಈ ಬಗ್ಗೆ ಖರ್ಗೆ ಅವರೇ ಹೇಳಿದ್ದಾರೆ: ಸತೀಶ್ ಜಾರಕಿಹೊಳಿ
ನಮ್ಮ ಸಿಎಂಗೆ ಲಜ್ಜೆಗೆಟ್ಟವನು ಅಂತೀರಾ, ಪರಮೇಶ್ವರ್ ಬಗ್ಗೆ ಧಮ್ ತಾಕತ್ ಇದ್ಯಾ ಅಂತೀರ, ಆದರೆ ಇಷ್ಟೆಲ್ಲಾ ಅದರೂ ನಿಮ್ಮನ್ನ ಯಾಕೆ ಒದ್ದು ಒಳಗೆ ಹಾಕಿಲ್ವೋ ನನಗೆ ಇನ್ನೂ ಗೊತ್ತಿಲ್ಲ. ನಮ್ಮ ಸಾಹೇಬ್ರು ನಿಮ್ಮನ್ನು ಯಾಕೆ ಸುಮ್ಮನೆ ಬಿಟ್ಟಿದ್ದಾರೋ ಗೊತ್ತಿಲ್ಲ. ಪ್ರತಾಪ್ ಸಿಂಹನ ಮೇಲೆ FIR ಆಗಿದೆ. ಈ ದೇಶಕ್ಕೆ ಮುಸ್ಲಿಂಮರ ಕೊಡುಗೆ ಇದೆ. ಅಬ್ದುಲ್ ಕಲಾಂರನ್ನ ಮಿಸೈಲ್ ಮ್ಯಾನ್ ಅಂತೇವೆ, ಅವರು ರಾಷ್ಟ್ರಪತಿಯಾಗಿದ್ದಾರೆ. ಅವರು ಮುಸ್ಲಿಂಮರಲ್ಲವೆ. ಮುಂದೆ ಜನರೇ ನಿಮಗೆ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ‘ ಆರ್.ಅಶೋಕ್ ಮತ್ತು ಸಿ,ಟಿ ರವಿ ದೊಡ್ಡ ಹಿಂದೂ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರೆಲ್ಲಾ ಡೋಂಗಿ ಹಿಂದುಗಳು. ನೀವು ಧರ್ಮ ಏನಾದ್ರೂ ಓದಿಕೊಂಡಿದ್ದರೆ. ಭಗವದ್ಗೀತೆ ಮೇಲೆ ಡಿಬೆಟ್ ಮಾಡೋಣ ಬನ್ನಿ. ಮೂರು ಜನಕ್ಕೆ ಧಮ್, ತಾಕತ್ ಇದ್ದರೆ ಈ ಕುರಿತು ಓಪನ್ ಡಿಬೆಟ್ ಮಾಡೋಣ ಎಂದು ಪ್ರದೀಪ್ ಈಶ್ವರ್ ಬಿಜೆಪಿಗರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.