Sunday, February 23, 2025

ಗಾಳಿಪಟ ಉತ್ಸವದಲ್ಲಿ ಹನುಮಂತು ಜೊತೆ ತತ್ವಪದ ಹಾಡಿದ ಸಚಿವ ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ : ನಗರದಲ್ಲಿ ನಡೆಯುತ್ತಿರುವ ಅಂತರ್​ ರಾಷ್ಟ್ರೀಯ ಗಾಳಿಪಟ ಉತ್ಸವದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ, ಬಿಗ್​ಬಾಸ್​ ವಿನ್ನರ್​ ಹನುಮಂತು ಜೊತೆಗೂಡಿ ತತ್ವಪದ ಹಾಡಿದ್ದಾರೆ.

ಹೌದು.. ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಅಂತರ್​ರಾಷ್ಟ್ರಿಯ ಗಾಳಿಪಟ ಉತ್ಸವದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿಗ್​ಬಾಸ್​ ವಿನ್ನರ್​ ಹನುಮಂತು ಲಮಾಣಿ ತಂಡ ಪ್ರದರ್ಶನ ನೀಡುತ್ತಿತ್ತು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವೇದಿಕೆ ಮೇಲೆ ಸಂತ ಶಿಶುನಾಳ ಶರೀಫರ ‘ತರವಲಾ ತಗಿ ನಿನ್ನ ತಂಬೂರಿ’ ಎಂಬ ತತ್ವಪದ ಹಾಡಿದ್ದಾರೆ.

ಇದನ್ನೂ ಓದಿ :‘ಕನ್ನಡ ಮಾತಾಡಿ’ ಎಂದ ಕಂಡೆಕ್ಟರ್​ ಮೇಲೆ ಪೋಕ್ಸೋ​ ಕೇಸ್​ ದಾಖಲಿಸಿದ ಪೊಲೀಸರು

ವೇದಿಕೆ ಮೇಲೆ ಹನುಮಂತುನನ್ನು ನೋಡಿದ ಜನರು ಜೋರಾಗಿ ಕೂಗುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದು. ಹನುಮಂತು ಕೂಡ ನೆರೆದಿದ್ದ ಜನರಿಗೆ ‘ಹಾಯ್​ ಹುಲಿ’ ಎಂದು ನೆರೆದಿದ್ದ ಜನರತ್ತ ಕೈಬೀಸಿ ಧನ್ಯವಾದ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹನುಮಂತು ಮತ್ತು ತಂಡ ಜನಪದ ಹಾಡುಗಳನ್ನು ಹಾಡುವ ಮೂಲಕ ಜನರನ್ನು ರಂಜಿಸಿದ್ದಾರೆ.

RELATED ARTICLES

Related Articles

TRENDING ARTICLES