Wednesday, February 12, 2025

ಅಂಬೇಡ್ಕರ್ ಪ್ರತಿಮೆ ಮುಂಭಾಗ ನವ ಜೀವನಕ್ಕೆ ಕಾಲಿಟ್ಟ ಯುವಜೋಡಿಗಳು

ವಿಜಯಪುರ : ಈಗಿನ ಕಾಲದ ಯುವಕರು ಅದ್ದೂರಿಯಾಗಿ ಮದುವೆಯಾಗಬೇಕು ಎಂದು ಕನಸು ಕಾಣುತ್ತಾರೆ. ಆದರೆ ಇಲ್ಲೊಂದು ಯುವ ಜೋಡಿ ಅಂಬೇಡ್ಕರ್​ ಪ್ರತಿಮೆ ಮುಂಭಾಗದಲ್ಲಿ ಸರಳವಾಗಿ ಮದುವೆಯಾಗಿದ್ದು. ಮನೆಯವರ ವಿರೋಧದ ಕಾರಣ ಈ ರೀತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯಪುರ ಜಿಲ್ಲೆಯ, ಮುದ್ದೇಬಿಹಾಳ ತಾಲೂಕಿನ ಲೇಬಗೇರಿ ಗ್ರಾಮದ ಯುವಕ ಸಂಗಮೇಶ ತಳವಾರ (24) ಹಾಗೂ ಬಾಗಲಕೋಟೆ ಜಿಲ್ಲೆಯ ಕಡ್ಲಿಮಟ್ಟಿ ಗ್ರಾಮದ ಯುವತಿ ಶಿವಾನಿ ಕಡ್ಲಿಮಟ್ಟಿ (22) ವಿವಾಹವಾಗಿದ್ದು. ಈ ಜೋಡಿಗಳು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ ಇವರಿಬ್ಬರ ಮದುವೆಗೆ ಯುವತಿಯ ಕುಟುಂಬಸ್ಥರು ಬಿಲ್​ಕುಲ್​ ಒಪ್ಪಿರಲಿಲ್ಲ.

ಇದನ್ನೂ ಓದಿ :ಇವಿಎಂ ಡೇಟಾ ಅಳಿಸದಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ

ಆದರೆ ಸಾಕಷ್ಟು ವಿರೋಧದ ಮಧ್ಯೆಯು ನವ ಜೋಡಿಗಳು ಸರಳ ಮದುವೆ ಮಾಡಿಕೊಂಡು ನವಜೀವನಕ್ಕೆ ಕಾಲಿಟ್ಟಿದ್ದು. ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡರ ನೇತೃತ್ವದಲ್ಲಿ ನಗರದ ಅಂಬೇಡ್ಕರ್​ ಪ್ರತಿಮೆ ಮುಂಭಾಗ ಸರಳವಾಗಿ ಮದುವೆ ಮಾಡಿಕೊಂಡು ನವಜೀವನಕ್ಕೆ ಕಾಲಿಟ್ಟಿದ್ದಾರೆ.

RELATED ARTICLES

Related Articles

TRENDING ARTICLES