Saturday, February 8, 2025

ಕೇಜ್ರಿವಾಲ್​ಗೆ ಭಾರಿ ಮುಖಭಂಗ: ನವದೆಹಲಿಯಲ್ಲಿ ಹೀನಾಯ ಸೋಲು

ದೆಹಲಿ : ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ಗೆ ಭಾರಿ ಮುಖಭಂಗ ಎದುರಾಗಿದ್ದು. ಬಿಜೆಪಿ ಅಭ್ಯರ್ಥಿ ಪರ್ವೇಶ್​ ವರ್ಮಾ ವಿರುದ್ದ ಸುಮಾರು 3000 ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಧ್ಯನೀತಿ ಹಗರಣದಲ್ಲಿ ಜೈಲು ಸೇರಿ ಹೊರಬಂದಿದ್ದ ಕೇಜ್ರಿವಾಲ್​ ತಮ್ಮ ಸಿಎಂ ಸ್ಥಾನವನ್ನು ಬಿಟ್ಟುಕೊಟ್ಟು. ಜನತಾ ನ್ಯಾಯಾಲಯದ ತೀರ್ಪು ಬಂದ ಬಳಿಕ ಮತ್ತೆ ಸಿಎಂ ಆಗುತ್ತೇನೆ ಎಂದು ಪ್ರಮಾಣ ಮಾಡಿದ್ದರು. ಆದರೆ ಜನತಾ ನ್ಯಾಯಾಲಯ ಕೇಜ್ರಿವಾಲ್​ ಕೈ ಬಿಟ್ಟಿದ್ದು. ಕಳೆದೊಂದು ದಶಕದಿಂದ ದೆಹಲಿಯ ಗದ್ದುಗೆ ಮೇಲೆ ಕುಳಿತು ಆಳ್ವಿಕೆ ಮಾಡಿದ್ದ ಕೇಜ್ರಿವಾಲ್​ಗೆ ಜನರು ಸೋಲಿನ ರುಚಿ ತೊರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪರ್ವೇಶ್​ ಶರ್ಮಾ ವಿರುದ್ದ ಕೇಜ್ರಿವಾಲ್​ ಸೋಲನುಭವಿಸಿದ್ದು. ಪರ್ವೇಶ್​ ದೆಹಲಿಯ ಸಿಎಂ ಅಭ್ಯರ್ಥಿ ಎಂಬ ಕೂಗುಗಳು ಕೇಳಿಬರುತ್ತಿವೆ.

ಇದನ್ನೂ ಓದಿ:ಚಾಲಕನ ನಿಯಂತ್ರಣ ತಪ್ಪಿ KSRTC ಬಸ್​ ಪಲ್ಟಿ: 15ಕ್ಕೂ ಹೆಚ್ಚು ಜನರಿಗೆ ಗಾಯ    

ಅಬಕಾರಿ ಹಗರಣದ ಪ್ರಮುಖ ಆರೋಪಿಗಳಾದ ಅರವಿಂದ್ ಕೇಜ್ರಿವಾಲ್​, ಮಾಜಿ ಡಿಸಿಎಂ ಮನೀಶ್​ ಸಿಸೋಡಿಯಾ ಇಬ್ಬರು ಸೋಲನುಭವಿಸಿದ್ದಾರೆ. ಜೊತೆಗೆ ಹವಲಾ ಹಗರಣದಲ್ಲಿ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ಕೂಡ ಸೋಲನುಭವಿಸಿದ್ದಾರೆ.

 

RELATED ARTICLES

Related Articles

TRENDING ARTICLES