Tuesday, February 4, 2025

ವಿಧಾನಸೌಧದಲ್ಲಿ ನಾಯಿಗಳಿಗೆ ಶೆಲ್ಟರ್​ ನಿರ್ಮಾಣ: ಐತಿಹಾಸಿಕ ತೀರ್ಮಾನ ಕೈಗೊಂಡ ಸ್ಪೀಕರ್​ ಖಾದರ್​

ಬೆಂಗಳೂರು : ವಿಧಾನಸೌಧದಲ್ಲಿ ಬೀದಿ ನಾಯಿಗಳಿಗೆ ಶೆಲ್ಟರ್ ನಿರ್ಮಾಣ ಮಾಡುವ ಐತಿಹಾಸಿಕ ತೀರ್ಮಾನವನ್ನು ಸ್ಪೀಕರ್​ ಯು,ಟಿ ಖಾದರ್​ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ವಿಧಾನಸೌಧ ಆವರಣದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಲು ಸ್ಪೀಕರ್​​ ತಜ್ಙರ ವರದಿಯನ್ನು ಕೋರಿದ್ದರು. ತಜ್ಙರ ತಂಡ ಈ ಕುರಿತು ವರದಿ ನೀಡಿದ್ದು. ರಾತ್ರಿ ವೇಳೆ ವಿಧಾನಸೌದ ಮತ್ತು ವಿಕಾಸ ಸೌಧದ ಕಾವಲಿನಂತೆ ಇರುವ ಶ್ವಾನಗಳಿಕೆ ಶೆಲ್ಟರ್​​ ನಿರ್ಮಿಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ವಿಧಾನ ಸೌಧ ಭದ್ರತಾ ಸಿಬ್ಬಂದಿಗಳು ಕೂಡ ಈ ಕುರಿತು ಮನವಿ ಮಾಡಿದ್ದರು. ಇದರ ನಿರ್ವಹಣೆಯನ್ನು ಪ್ರಾಣ ದಯಾ ಸಂಘಕ್ಕೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಅಕ್ರಮ ಸಂಬಂಧ ಬೆಳೆಸುವಂತೆ ಒತ್ತಾಯ: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹ*ತ್ಯೆ

ಸಭಾಪತಿ ಬಸವರಾಜ್​ ಹೊರಟ್ಟಿ ಹೇಳಿಕೆ !

ಈ ವಿಶಯದ ಕುರಿತು ಸಭಾಪತಿ ಬಸವರಾಜ್​ ಹೊರಟ್ಟಿ ಹೇಳಿಕೆ ನೀಡಿದ್ದು. ವಿಧಾನಸೌಧದಲ್ಲಿ ನಾಯಿಗಳನ್ನ ಸಾಕಲು ತೀರ್ಮಾನ ಮಾಡಿದ್ದೇವೆ. ಏನ್ ಮಾಡ್ತೀವಿ ,ಅದಕ್ಕೆ ಏನು ಹಾಕ್ತೀವಿ ಅದು ಬೇರೆ. ಈ ಕುರಿತು ಪರ ವಿರೋಧ ಇರ್ತಾವೆ, ಅದು ಸರಿಯಾಗಬೇಕು. ಫಸ್ಟ್ ಟೈಂ ಇತಿಹಾಸದಲ್ಲಿ ನಾಯಿಗಳನ್ನ ವಿಧಾನಸೌಧದಲ್ಲಿ ಸಾಕಲಾಗಿದೆ.

ಇವುಗಳಿಕೆ ಪ್ರತ್ಯೇಕ ಶೆಲ್ಟರ್ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದೇವೆ, ಇಲ್ಲ ಅಂದ್ರೆ ಕಂಟ್ರೋಲ್ ಮಾಡೋಕೆ ಆಗೋದಿಲ್ಲ, ಒಂದು ಕಡೆ ಮನೆ ಮಾಡಿ, ಅವುಗಳು ಗೇಟ್​ ಹೊರಗೆ ಹೋಗಿ ಬರುವುದಕ್ಕೆ ವ್ಯವಸ್ಥೆ ಮಾಡಲು ಯತ್ನಿಸುತ್ತೇವೆ. ನಾವು ಬೆಳಿಗ್ಗೆ ಬಂದು ಊಟ ಹಾಕಿದರೆ ಅವು ನಮಗೆ ಏನು ಮಾಡಲ್ಲ. ವಿಧಾನಸೌದದಲ್ಲಿ ಇವತ್ತಿನವರೆಗೂ ಎಲ್ಲಿಯೂ ಕೂಡ ನಾಯಿಗಳು ಅಟ್ಯಾಕ್​ ಮಾಡಿಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES