ಕೊಲೆ ಪ್ರಕರಣಲ್ಲಿ ನಟ ದರ್ಶನ್ ಪೊಲೀಸರ ವಶದಲ್ಲಿದ್ದು ವಿಚಾರಣೆ ಎದರಿಸುತ್ತಿದ್ದಾರೆ. ಈ ಪ್ರಕರಣದ ತನಿಖೆ ಆರಂಭವಾದಗಿನಿಂದ ಅಚ್ಚರಿಯ ಬೆಳವಣಿಗೆಗಳು ಹೊರಬರುತ್ತಿದ್ದು ದರ್ಶನ್ಗೆ ಸಂಕಷ್ಟಗಳು ಹೆಚ್ಚುತ್ತಲೇ ಇದೆ. ಇದಕ್ಕೆಲ್ಲಾ ಮೂಲ 5 ದೇವತೆಗಳ ಪ್ರಭಾವ ಎಂದು ಜೋತಿಷಿ ಡಾ.ಬಸವರಾಜ್ ಗುರೂಜಿಯವರು ತಿಳಿಸಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ A2 ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದಾರೆ ಈ ಪ್ರಕರಣದಲ್ಲಿ ಪ್ರಮುಖವಾಗಿ ರಾಜರಾಜೇಶ್ವರಿ (ನಗರ), ಕಾಮಾಕ್ಷಿ(ಪಾಳ್ಯ), ಅನ್ನಪೂರ್ಣೇಶ್ವರಿ (ಪೊಲೀಸ್ ಠಾಣೆ), ರೇಣುಕಾ (ಸ್ವಾಮಿ), ವಿಜಯಲಕ್ಷ್ಮಿ ಈ ಐದು ಹೆಣ್ಣು ದೇವತೆಗಳ ಪ್ರಭಾವ ಸ್ಪಷ್ಟವಾಗಿ ಗೋಚರವಾಗುತ್ತಿದ್ದು ಇದರ ಫಲಿತಾಂಸ ತೀವ್ರವಾಗಿ ಗೋಚರವಾಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಕಿಲ್ಲಿಂಗ್ ಸ್ಟಾರ್ ದರ್ಶನ್ ಮನೆ ಉಡೀಸ್?
ದರ್ಶನ್ ಆಪ್ತ ಗೆಳತಿ ಪವಿತ್ರಾಗೌಡ ಗೆ ಅಶ್ಲೀಲ ಮೆಸೇಜ್ ಕಳಿಸಿದ ಎಂಬ ಕಾರಣಕ್ಕೆ ನಟ ದರ್ಶನ್ ಅಂಡ್ ಗ್ಯಾಂಗ್ ತನ್ನ ಅಭಿಮಾನಿಯೂ ಆಗಿರುವ ಚಿತ್ರದುರ್ಗದ ಮೂಲದ ರೆಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿನ ಕಾಮಾಕ್ಷಿ ಪಾಳ್ಯದಲ್ಲಿರುವ ಶೆಡ್ ನಲ್ಲಿರಿಸಿ ಹಲ್ಲೆ ನಡೆಸಿ ಕೊಲೆ ಮಾಡಿ, ಇದೀಗ ಪೊಲೀಸರ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.