ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ಮುಚ್ಚಿಹಾಕಲು 1 ಕೋಟಿ ಆಫರ್ ದರ್ಶನ್ ಕಡೆಯಿಂದ ಹೋಗಿತ್ತು ಅನ್ನೋ ಗುಸುಗುಸು ಚರ್ಚೆ ಕೂಡ ಈಗ ನಡೆಯುತ್ತಿದೆ.
ಪೊಲೀಸ್ ಮತ್ತು ರಾಜಕಾರಣಿಗಳ ಪ್ರಭಾವ ಬಳಸಿ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ದರ್ಶನ್ ತರಹೇವಾರಿ ಸರ್ಕಸ್ ಮಾಡಿದ್ದು ಹಂತ ಹಂತವಾಗಿ ಬಯಲಾಗ್ತಿದೆ. ಒಂದು ಕೋಟಿ ಡೀಲ್ಗೆ ದರ್ಶನ್ ಮುಂದಾಗಿದ್ದರು. ತಾನು ಲಾಕ್ ಆಗೋದು ಪಕ್ಕಾ ಎಂದು ತಿಳಿಯುತ್ತಲೇ ಆ್ಯಕ್ಟೀವ್ ಆಗಿದ್ದ ದರ್ಶನ್ 1 ಕೋಟಿ ನೀಡುವ ಆಫರ್ ಮುಂದಿಟ್ಟಿದ್ದರಾ ಎಂಬ ಪ್ರಶ್ನೆ ಕಾಡುತ್ತಿದೆ.
ಇದನ್ನೂ ಓದಿ: ದರ್ಶನ್ ಕರಾಳ ಮುಖ ಬಯಲು: ಪರಿಹಾರ ಕೇಳಲು ಹೋದವರಿಗೆ ನಾಯಿ ಛೂ ಬಿಟ್ಟು ವಿಕೃತಿ
ಈಗಾಗಲೇ ಕೊಲೆಯಾಗಿರುವ ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆಯ ವೇಳೆ ಮರಣೋತ್ತರ ವರದಿಯನ್ನೇ ತಿರುಚಲು ದರ್ಶನ್ ಮತ್ತು ಗ್ಯಾಂಗ್ ಮುಂದಾಗಿತ್ತು ಎನ್ನಲಾಗ್ತಿದೆ. ಮೃತನು ಹಲ್ಲೆಯಿಂದ ಸಾವಾಗಿಲ್ಲ, ಹಾರ್ಟ್ ಅಟ್ಯಾಕ್ನಿಂದ ಸಾವು ಎಂದು ವರದಿ ನೀಡಲು ಆಮಿಷ ಒಡ್ಡಲಾಗಿತ್ತು ಎಂಬ ಗುಸುಗುಸು ಒಂದಿಷ್ಟು ಪೊಲೀಸ್ ವಲಯಗಳಿಂದಲೇ ಕೇಳಿಬರುತ್ತಿದೆ. ಆದರೇ, ತನಿಖೆ ನಡೆಸುತ್ತಿರೋ ಪೊಲೀಸರು ಮತ್ತು ತನಿಖಾಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿದಿಲ್ಲ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ.