ಕಲಬುರಗಿ: ನರೇಂದ್ರ ಮೋದಿ ಸರ್ಕಾರ ಅತಿ ದೊಡ್ಡ ಭ್ರಷ್ಟ ಸರ್ಕಾರ ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಸರ್ಕಾರದ ಅತಿ ದೊಡ್ಡ ಭ್ರಷ್ಟಾಚಾರದ ಸರ್ಕಾರ.ಸುಪ್ರೀಂ ಕೋರ್ಟ್ ಎಲೆಕ್ಟ್ರಾಲ್ ಬಾಂಡ್ ಬಗ್ಗೆ ಕೇಳಿದೆ ಆದ್ರೆ ಎಸ್ಬಿಐನವರು ಜೂನ್ 30 ವರೆಗೆ ಸಮಯವಕಾಶ ಕೇಳಿದೆ.ಜೂನ್ 30 ವರೆಗೂ ಕೇಳಿರೊದಕ್ಕೆ ಕಾರಣ ಚುನಾವಣೆ ಮುಗಿಯಲಿ ಅಂತಾ
ಖುದ್ದು ಪ್ರಧಾನಿ ಮೋದಿಯವರ ಸೂಚನೆ ಮೇರೆಗೆ ಎಸ್ ಬಿ ಐ ಮುಂದಕ್ಕೆ ಹಾಕಿದೆ. ಮೋದಿ ಸರ್ಕಾರವೆ ತಂದಿರುವ ಎಲೆಕ್ಟ್ರಾಲ್ ಬಾಂಡ್ ಇವತ್ತು ಅವರದ್ದೇ ಆರು ಸಾವಿರ ಕೋಟಿಯ ಬಾಂಡ್ಗಳು ಸಿಕ್ಕಿವೆ ಎಂದರು.
ಕಲಬುರಗಿ ಲೋಕಸಭಾ ಕ್ಷೇತ್ರ ಎಐಸಿಸಿ ಅಧ್ಯಕ್ಷರ ತವರು ಕ್ಷೇತ್ರವಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಯಾರು ಕಾಂಗ್ರೆಸ್ ಅಭ್ಯರ್ಥಿ ಎಂಬುದು ಅಂತಿಮವಾಗಿಲ್ಲ.ಮಾಚ್೯ 20 ರಂದು ಇದರ ಬಗ್ಗೆ ಅಂತಿಮ ತೀರ್ಮಾನ ಆಗುತ್ತದೆ.ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಹಿನ್ನಲೆ ದೇಶ ಸುತ್ತಾಡಿ ಪ್ರಚಾರ ಮಾಡಬೇಕಾಗಿದೆ.ಅವರು ಸ್ಪರ್ಧೆ ಮಾಡಿದ್ರೆ ಒಳ್ಳೆಯದು ಅವರು ಸ್ಪರ್ಧೆ ಮಾಡಲ್ಲ ಅಂದ್ರೆ ಅವರ ಅಳಿಯ ರಾಧಾಕೃಷ್ಣ ಅವರಿಗೆ ಪತ್ರ ಟಿಕೆಟ್ ಕೊಡಲು ನಾವು ಮನವಿ ಮಾಡಿದ್ಧೇವೆ ಎಂದರು.