ಹಾಸನ : ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಬಿಜೆಪಿ ಸಂಸ್ ಅನಂತ್ ಕುಮಾರ್ ಹೆಗಡೆಗೆ ಸಚಿವ ಕೆ.ಎನ್. ರಾಜಣ್ಣ ತಿರುಗೇಟು ನೀಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ ಕುಮಾರ್ ಹೆಗಡೆ ಮನುಷ್ಯನೇ ಅಲ್ಲ. ಅವರು ಒಬ್ಬ ಸಚಿವರಾಗಿದ್ದವರು. ನಾವು ಸಂವಿಧಾನ ಬದಲಾಯಿಸುತ್ತೇವೆ. ಜನ ಅದಕ್ಕೆ ನಮಗೆ ವೋಟು ಹಾಕಿರೋದು ಅಂತ ಹೇಳ್ತಾರಲ್ಲ, ಅವರ ತಲೆಯಲ್ಲಿ ಏನಾದರೂ ಬುದ್ದಿ ಇದೆಯಾ? ಎಂದು ಕಿಡಿಕಾರಿದ್ದಾರೆ.
ಅತೀ ಶೀಘ್ರದಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುತ್ತದೆ. ನಿನ್ನೆ ಸುರ್ಜೇವಾಲ ಅವರ ಮಗನ ಮದುವೆ ಇತ್ತು. ಅವರು ಕಳೆದ ಎರಡ್ಮೂರು ದಿನದಿಂದ ಮದುವೆಯಲ್ಲಿ ಬ್ಯುಸಿ ಇದ್ದರು. ಇವತ್ತು ಅವರು ಬೆಂಗಳೂರಿಗೆ ಬರ್ತಾರೆ. ನಾಳೆ ರಾಜ್ಯಸಭಾ ಚುನಾವಣೆಗೆ ಎಲ್ಲಾ ಶಾಸಕರು ಮತದಾನ ಮಾಡಲು ಮನವರಿಕೆ ಮಾಡುತ್ತಾರೆ ಎಂದು ಹೇಳಿದ್ದಾರೆ.
ಮೂರು ಜನರಿಗೂ ಮತಗಳನ್ನು ಹಂಚಿಕೆ
ಇವತ್ತು ಸಂಜೆ ಬಂದು ಆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಶಾಸಕರನ್ನೆಲ್ಲಾ ಒಟ್ಟಾಗಿ ಇಡೋದು, ಮೂರು ಜನರಿಗೂ ಮತಗಳನ್ನು ಹಂಚಿಕೆ ಮಾಡಬೇಕು. ಫೆ.27ರ ಚುನಾವಣೆ ಮಧ್ಯಾಹ್ನ ವೇಳೆಗೆ ಮುಗಿಯುತ್ತೆ. ಚುನಾವಣೆ ಮುಗಿದ ನಂತರ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಬಗ್ಗೆ ಗಮನಹರಿಸಿ, ಆದಷ್ಟು ಬೇಗ ಬಿಡುಗಡೆ ಮಾಡ್ತಾರೆ ಎಂದು ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.