ವಿಜಯಪುರ: ಶೋಭಕ್ಕ ಅವರ ಕ್ಷೇತ್ರದಲ್ಲಿ ಅವರದ್ದೇ ಟಿಕೇಟ್ ಕಟ್ ಆಗಲಿದೆ ಮೊದಲು ಅವರ ಸೀಟ್ ಗಟ್ಟಿ ಮಾಡಿಕೊಳ್ಳಲಿ ಎಂದು ಸಚಿವ ಎಂ.ಬಿ ಪಾಟೀಲ್ ಶೋಭಾ ಕರಂದ್ಲಾಜೆ ವಿರುದ್ದ ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಸೋಲಿಸಿ 135 ಸೀಟ್ ಗಳನ್ನು ಕಾಂಗ್ರೆಸ್ ಸರ್ಕಾರಕ್ಕೆ ಜನ ನಿಡಿದ್ದಾರೆ. ರಾಜ್ಯ ಸರ್ಕಾರವನ್ನು ಅತಂತ್ರ ಮಾಡಲು ಆಪರೇಷನ್ ಕಮಲ ಮಾಡುತ್ತೇವೆ ಎಂದರೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಶೋಭಕ್ಕ 50 ಶಾಸಕರನ್ನು ಎಲ್ಲಿಂದ ಕರ್ಕೊಂಡು ಬರ್ತಾರೆ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮಮತಾರನ್ನು ‘ದೀದಿ’ ಎನ್ನಬೇಡಿ, ಈಗ ‘ಆಂಟಿ’ ಆಗಿದ್ದಾರೆ
ಶೋಭಕ್ಕನ ಕ್ಷೇತ್ರದಲ್ಲಿ ಶೋಭಕ್ಕನಿಗೆ ಟಿಕೇಟ್ ನೀಡಲು ವಿರೋಧವಿದೆ ಮೊದಲು ಅವರ ಟಿಕೆಟ್ ಗಟ್ಟಿಗೊಳಿಸಿಕೊಳ್ಳಲಿ ಎಂದು ಅವರು ಹೇಳಿದರು.