Monday, October 28, 2024

ಕರ್ನಾಟಕದ ಮಂತ್ರಿಯಾಗಿ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ ಬಿಜೆಪಿ ಸಚಿವ ನಾರಾಯಣ ಗೌಡ

ಮಂಡ್ಯ: ಫೆಬ್ರವರಿ 20 ರಂದು ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಕಾರ್ಯರ್ಕ್ರಮದಲ್ಲಿ  ಮಹಾರಾಷ್ಟ್ರಕ್ಕೆ ಜೈಕಾರ ಕೂಗಿ ಪೌರಾಡಳಿತ ಹಾಗೂ ತೋಟಗಾರಿಕೆ ಸಚಿವ ನಾರಾಯಣ ಗೌಡ ವಿವಾದಕ್ಕೆ ಗುರಿಯಾಗಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ‘ಈಗ ನಾನು ಏನೇ ಆಗಿದ್ದರೂ ಅದಕ್ಕೆ ಕಾರಣ ಮಹಾರಾಷ್ಟ್ರ. ಕಳೆದ 35 ವರ್ಷಗಳಿಂದ ಮುಂಬೈ ನಗರದಲ್ಲಿದ್ದೀನಿ. ನಾನು ಇಲ್ಲಿಂದ ಹೋಗಿ ಅಲ್ಲಿ ಒಬ್ಬ ಹೋಟೆಲ್ ಉದ್ಯಮಿಯಾಗಿ, ಬಿಲ್ಡರ್ ಆಗಿದ್ದೇನೆ. ಅದಾದ ಬಳಿಕ ಇಲ್ಲಿಗೆ ಬಂದು ರಾಜಕಾರಣಿಯಾಗಿದ್ದೇನೆ. ಅದಕ್ಕಾಗಿ ನಾನು ಮಹಾರಾಷ್ಟ್ರಕ್ಕೆ ಋಣಿಯಾಗಿದ್ದೇನೆ‘ ಎಂದು ಹೇಳುತ್ತಾ, ಜೈ ಮಹಾರಾಷ್ಟ್ರ, ಜೈ ಶಿವಾಜಿ ಅಂತ ಜೈಕಾರ ಹಾಕುತ್ತಾರೆ. ಇಂದು ನನ್ನ ದೇಹದಲ್ಲಿ ಶಕ್ತಿ, ತಾಕತ್ತು ಇದೆ ಅಂದರೆ ಅದು ಮಹಾರಾಷ್ಟ್ರದ್ದು ಎನ್ನುತ್ತಾ ಮರಾಠ ಪ್ರೇಮ ಮೆರೆದಿದ್ದಾರೆ.

RELATED ARTICLES

Related Articles

TRENDING ARTICLES