Monday, October 28, 2024

`ಜಿಹಾದಿಗಳಿಗಾಗಿ ರೋದಿಸುತ್ತಿರೋದೇಕೆ’ ? : ಕುಮಾರಸ್ವಾಮಿ ಕುಟುಕಿದ ಬಿಜೆಪಿ

ಬೆಂಗಳೂರು: ನಿನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಸಜೀವ ಬಾಂಬ್​ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸರ ಮೇಲೆ ಅನುಮಾನ ವ್ಯಕ್ತಪಡಿಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿರುವ ಬಿಜೆಪಿ, ಜಿಹಾದಿಗಳ ಪರ ಯಾಕೆ ರೋದಿಸುತ್ತಿರುವುದೇಕೆ ಎಂದು ಕುಟುಕಿದೆ. 

ಕುಮಾರಸ್ವಾಮಿಯವರು ಸರ್ಜಿಕಲ್​ ಸ್ಟ್ರೈಕ್​​ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದರು. ಮಂಗಳೂರಿನಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಯಾವುದೇ ಗಲಭೆಯಲ್ಲಿ ತೊಡಗಿಲ್ಲ ಎಂದು ಫೇಕ್​ ಸಿಡಿಗಳನ್ನು ತಯಾರಿಸಿದ್ದರು. ಇದೀಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ದೊರೆತ ಬಾಂಬ್​ ನಿಷ್ಕ್ರಿಯಗೊಳಿಸಿರೋದಕ್ಕೆ ಪೊಲೀಸರ ವಿರುದ್ಧವೇ ಸಂಶಯ ಪ್ಯಕ್ತಪಡಿಸುತ್ತಿದ್ದಾರೆ. ಜಿಹಾದಿ ಮನಸ್ಥಿತಿಯುಳ್ಳ ವ್ಯಕ್ತಿಗಳ ಪರವಾಗಿ ರೋಧನವೇಕೆ ಎಂದು ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್​ ಮೂಲಕ ಪ್ರಶ್ನೆ ಮಾಡಿದೆ.

RELATED ARTICLES

Related Articles

TRENDING ARTICLES