ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕ ಅಂತ ಕೇಂದ್ರ ಗೃಹಸಚಿವ ಅಮಿತ್ ಶಾ ಗುಣಗಾನ ಮಾಡಿದ್ದಾರೆ.
ವೇದಾಂತ ಭಾರತಿ ಸಂಸ್ಥೆ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿವೇಕ ದೀಪಿನಿ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ದೇಶದ ಸಂಸ್ಕೃತಿಯ ಪ್ರತೀಕವಾಗಿ ಪ್ರಪಂಚದಾದ್ಯಂತ ಪ್ರವಾಸ ಮಾಡುತ್ತಿದ್ದಾರೆ ಎಂದ ಅವರು, ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ವಾರಣಾಸಿಯಲ್ಲಿ ಪವಿತ್ರ ಗಂಗಾ ಸ್ನಾನಮಾಡಿ, ಗಂಗಾ ಆರತಿಯಲ್ಲಿ ಪಾಲ್ಗೊಂಡಿದ್ದನ್ನೂ ಸ್ಮರಿಸಿದರು.
ಶಂಕರಾಚಾರ್ಯರು ಅದ್ವೈತ ಮಾರ್ಗದಿಂದ ಲೋಕ ಕಲ್ಯಾಣವಾಗುತ್ತದೆ ಎಂದಿದ್ದರು. ಭಕ್ತಿ, ಕರ್ಮ, ಜ್ಞಾನದ ಬಗ್ಗೆ ಅವರು ನಂಬಿಕೆ ಇಟ್ಟಿದ್ದರು. ವಿವೇಕ ದೀಪಿನಿ ಮಂತ್ರವು 24 ಭಾಷೆಗಳಿಗೆ ಭಾಷಾಂತರ ಆಗುತ್ತಿರುವುದು ಸಂತಸದ ವಿಷಯ, ನನ್ನ ಮಾತೃ ಭಾಷೆ ಗುಜಾರಾತಿಯಲ್ಲೂ ಈ ಮಂತ್ರ ಪಠಣಕ್ಕೆ ಅವಕಾಶ ಸಿಗುತ್ತಿರುವುದು ಖುಷಿ ವಿಚಾರ ಎಂದು ಹೇಳಿದರು.
ಕೆಲವೇ ತಿಂಗಳಲ್ಲಿ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಅಮಿತ್ ಶಾ : ಬಿಎಸ್ ವೈ