Sunday, September 22, 2024

ಎರಡು ಬೈಕ್ ಗಳ ನಡುವೆ ಡಿಕ್ಕಿ ; ಓರ್ವ ಸವಾರ ಸಾವು

ಮೈಸೂರು : ಚಲಿಸುತ್ತಿದ್ದ ಎರಡು ಬೈಕ್​ಗಳ ನಡುವರ ಭೀಕರ ಅಪಘಾತ ಓರ್ವ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಘಟನೆ ನರಸೀಪುರ ತಾಲೂಕಿನ ಕುರುಬೂರು ಗ್ರಾಮದ ಬಳಿ ನಡೆದಿದೆ.

ಕುರುಬೂರು ಗ್ರಾಮದ ನಾಗರಾಜು (80) ಮೃತ ದುರ್ದೈವಿ. ಎಂಬಾತ ಮತ್ತು ಮತ್ತೊಬ್ಬ ವ್ಯಕ್ತಿ ಬೈಕ್​ನಲ್ಲಿ ಬರುತ್ತಿರುವ ವೇಳೆ ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ನಾಗರಾಜು ಎಂಬುವವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಇದನ್ನು ಓದಿ : ಬೆಂಗಳೂರು ಪೊಲೀಸರನ್ನು ಖುಷಿ ಪಡಿಸಿದ ಕಿಂಗ್ ಕೊಹ್ಲಿ

ಈ ಹಿಂದೆ ಅದೇ ಜಾಗದಲ್ಲಿ ಕಾರ್ ಮತ್ತು ಬಸ್ ನಡುವೆ ಅಪಘಾತಗೊಂಡು 10 ಜನ ಮೃತಪಟ್ಟಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿಕೊಂಡಿದ್ದರು ಪ್ರಯೋಜನ ಆಗಿರಲಿಲ್ಲ. ಈ ಹಿನ್ನೆಲೆ ಘಟನೆಯನ್ನು ಖಂಡಿಸಿ ನಡು ರಸ್ತೆಯಲ್ಲಿ ನಾಗರಾಜು ಅವರ ಮೃತದೇಹ ಇಟ್ಟು ಪ್ರತಿಭಟನೆ ಮಾಡುತ್ತಿರುವ ಗ್ರಾಮಸ್ಥರು.

ಕುರುಬೂರು ಗ್ರಾಮದ ಬಳಿ ಸಾಕಷ್ಟು ಅಪಘಾತವಾಗುತ್ತಿದ್ದು, ಮೈಸೂರು ಚಾಮರಾಜನಗರ ಮುಖ್ಯ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES