Friday, September 20, 2024

ಚಕ್ರವರ್ತಿ ಸೂಲಿಬೆಲೆ ವಿರುದ್ಧ FIR

ಶಿವಮೊಗ್ಗ : ಕೆಪಿಸಿಸಿ ಸೋಷಿಯಲ್ ಮೀಡಿಯಾ ಉಪಾಧ್ಯಕ್ಷೆ ಸೌಗಂಧಿಕಾ ರಘುನಾಥ್ ವಿರುದ್ಧ ಅವಹೇಳನಕಾರಿ ಕಾಮೆಂಟ್​ ಮಾಡಿದ ಹಿನ್ನೆಲೆಯಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ದಾಖಲಾಗಿದೆ.

ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಚಂದ್ರಯಾನದ ಬಗ್ಗೆ ಪೋಸ್ಟ್​ಗೆ ಸೌಗಂಧಿಕಾ ಕಾಮೆಂಟ್ ಮಾಡಿದ್ದರು. ಇದಕ್ಕೆ.. ನಿನಗೆ ಯಾಕೆ, ಎಲ್ಲಿ ಉರಿ ಬಂತೋ ಗೊತ್ತಾಗಿಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸೌಗಂಧಿಕಾ ದೂರು ನೀಡಿದ್ದಾರೆ.

ಸೌಗಂಧಿಕ ಪ್ರತಿಕ್ರಿಯೆ ಏನು?

ಫೇಸ್ ಬುಕ್ ನಲ್ಲಿ ಚಕ್ರವರ್ತಿ ಸೂಲಿಬೆಲಿ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ದೇವರಿಗೆ ಕೈ ಮುಗಿದು ಫೋಟೋ ಹಾಕುವಂತೆ ಕರೆ ನೀಡಿದ್ದರು. ಈ ಪೋಸ್ಟ್ ಸೌಗಂಧಿಕ ಕಾಮೆಂಟ್ ಮಾಡಿದ್ದರು. ದೇವರ ಪೂಜೆಗಿಂತ ವಿಜ್ಞಾನಿಗಳ ಶ್ರಮಕ್ಕೆ ಯಶಸ್ವಿಯಾಗಲಿ ಅಂತ ಪ್ರಾರ್ಥಿಸೋಣ ಎಂದಿದ್ದರು.

RELATED ARTICLES

Related Articles

TRENDING ARTICLES