Sunday, May 19, 2024

ಮಾವನಿಂದ ಕಿತ್ತು ಅತ್ತೆಗೆ ಕೊಡುವ ಕೆಲಸ ಮಾಡಿದ್ದಾರೆ : ಸಿ.ಟಿ ರವಿ

ಬೆಂಗಳೂರು : ಸಿದ್ದರಾಮಯ್ಯ ಮಾವನಿಂದ ಕಿತ್ತು ಅತ್ತೆಗೆ ಕೊಡುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಗುಡುಗಿದರು.

ರಾಜ್ಯ ಬಜೆಟ್ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಯಾವುದೇ ದೂರದೃಷ್ಟಿ ಇಲ್ಲದ ಬಜೆಟ್ ಎಂದು ಕುಟುಕಿದರು.

ಈಗಾಗಲೇ ಬೆಲೆ ಏರಿಕೆಯಿಂದ ರಾಜ್ಯದ ಜನ ತತ್ತರಿಸಿದ್ದಾರೆ. ಬಜೆಟ್ ನಲ್ಲಿ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲಾಗಿದೆ. ಇಂದಿನ ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ಹೊರೆಯನ್ನು ಹಾಕಲಾಗಿದೆ. ಹೊಸದಾಗಿ 85 ಸಾವಿರ ಕೋಟಿಯನ್ನು ಸಾಲ‌ ಮಾಡಿದ್ದಾರೆ. ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿಗೆ ಯಾವುದೇ ಕ್ರಮ‌ಕೈಗೊಗೊಂಡಿಲ್ಲ ಎಂದು ಚಾಟಿ ಬೀಸಿದರು.

ಇದನ್ನೂ ಓದಿ : ಡಿಕೆಶಿ ಮೇಲೆ ಸಿದ್ದರಾಮಯ್ಯ ಸೇಡು ತೀರಿಸಿಕೊಂಡಿದ್ದಾರೆ : ಬಿ.ವೈ ವಿಜಯೇಂದ್ರ

ರೈತರಿಗೆ ಲಾಭವಾಗಬೇಕು

ರೈತರನ್ನು ದಲ್ಲಾಳಿಗಳಿಂದ ಹೊರಬರದಂತೆ ಈ ಸರ್ಕಾರ ಮಾಡಿದೆ. ರೈತರನ್ನು ಜಾಗತಿಕ ಮಾರುಕಟ್ಟೆಯಿಂದ‌ ಹೊರಗಿಡುವ ಕೆಲಸ ಮಾಡಲಾಗುತ್ತಿದೆ. ಎಪಿಎಂಸಿಗೆ ಲಾಭವಾಗಬೇಕು ಅನ್ನೋದು ಈ‌ ಸರ್ಕಾರದ ಉದ್ದೇಶ. ನಾವು ರೈತರಿಗೆ ಲಾಭವಾಗಬೇಕು ಅಂತ ಕಾಯ್ದೆ ತಂದಿದ್ದೆವು. ಇವರು ಎಪಿಎಂಪಿ ಕಾಯಿದೆ ರದ್ದು ಮಾಡಿದ್ದಾರೆ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES