Sunday, October 27, 2024

ಸ್ಪೀಕರ್ ಸ್ಥಾನಕ್ಕೆ ರಮೇಶ್​ ಕುಮಾರ್ ರಾಜೀನಾಮೆ

ಬೆಂಗಳೂರು : ರಮೇಶ್ ಕುಮಾರ್​ರವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್​ ಮೈತ್ರಿ ಸರ್ಕಾರದಲ್ಲಿ ಕಳೆದ 14 ತಿಂಗಳುಗಳ ಕಾಲ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ್ದ ಅವರು ಇಂದು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಶುಕ್ರವಾರ ನೂತನ ಸಿಂಎ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿ.ಎಸ್​ ಯಡಿಯೂರಪ್ಪ ಇಂದು ಸದನದಲ್ಲಿ ವಿಶ್ವಾಸ ಮತ ಸಾಬೀತು ಪಡಿಸಿದರು. ವಿಶ್ವಾಸ ಮತದ ಬಳಿಕ ಹಣಕಾಸು ವಿದೇಯಕವನ್ನು ಅಂಗೀಕರಿಸಲಾಯಿತು. ನಂತರ ರಮೇಶ್ ಕುಮಾರ್​ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ತಮ್ಮ ವಿದಾಯದ ಭಾಷಣ ಮಾಡಿದ ಅವರು, ಈ ದೇಶದಲ್ಲಿ ಭ್ರಷ್ಟಾಚಾರದ ಮೂಲ ಚುನಾವಣೆಗಳು. ಚುನಾವಣಾ ವ್ಯವಸ್ಥೆ ಸುಧಾರಣೆ ಆಗದಿದ್ದಲ್ಲಿ ಭಷ್ಟಾಚಾರ ನಿರ್ಮೂಲನೆ ಆಗಲ್ಲ ಅಂದರು. ಜೊತೆಗೆ ಲೋಕಾಯುಕ್ತದಲ್ಲಿ ಸುಧಾರಣೆ ಆಗಲೇ ಬೇಕೆಂದರು. ತಮ್ಮ ರಾಜಿನಾಮೆ ಪತ್ರವನ್ನು ಡೆಬ್ಯುಟಿ ಸ್ಪೀಕರ್ ಕೃಷ್ಣಾರೆಡ್ಡಿಯವರಿಗೆ ನೀಡಿ ಸದನದಿಂದ ನಿರ್ಗಮಿಸಿದ್ರು.

RELATED ARTICLES

Related Articles

TRENDING ARTICLES