Sunday, October 27, 2024

14 ತಿಂಗಳ ನರಕ ಅಂತ್ಯ : ಜಿ.ಎಸ್​ ಬಸವರಾಜ್​

ಬೆಂಗಳೂರು : ದೋಸ್ತಿ ಸರ್ಕಾರ ರಾಜ್ಯದ ಜನರು ನರಕ ಅನುಭವಿಸುವ ಸ್ಥಿತಿ ತಂದಿತ್ತು. ಆದ್ರೆ ಈಗ ರಾಜ್ಯದಲ್ಲಿ 14 ತಿಂಗಳ ನರಕ ಅಂತ್ಯವಾಗಿದೆ ಅಂತ ತುಮಕೂರು ಸಂಸದ ಜಿ.ಎಸ್​ ಬಸವರಾಜ್​ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಿಂದ ರಾಜ್ಯದಲ್ಲಿ ನರಕ ಸ್ಥಿತಿ ನಿರ್ಮಾಣವಾಗಿತ್ತು. ಈ 14 ತಿಂಗಳ ನರಕ ಈಗ ಅಂತ್ಯವಾಗಿದೆ. ನಮ್ಮ ನಾಯಕರು ರಾಜ್ಯದ ಮುಖ್ಯಮಂತ್ರಿ ಆಗ್ತಾರೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತ ಇರುತ್ತೆ. ಯಾವುದೇ ಭಿನ್ನಾಭಿಪ್ರಾಯ ಉದ್ಭವಿಸುವುದಿಲ್ಲ. ಉತ್ತಮ ಅಭಿವೃದ್ಧಿ ಕೆಲಸ ಹೊಸ ಸರಕಾರದಿಂದ ಸಾಧ್ಯ ಎಂದಿದ್ದಾರೆ.

RELATED ARTICLES

Related Articles

TRENDING ARTICLES