Sunday, October 27, 2024

ರಾಮಲಿಂಗ ರೆಡ್ಡಿ, ವಿಶ್ವನಾಥ್​ ಸೇರಿ 12 ಶಾಸಕರು ರಾಜೀನಾಮೆ..!

ಬೆಂಗಳೂರು :  ದಿಢೀರ್ ಅಂತ ರಾಜ್ಯ ರಾಜಕಾರಣದಲ್ಲಿ ಸಂಚಲನ ಉಂಟಾಗಿದೆ.  ಕಾಗ್ರೆಸ್-ಜೆಡಿಎಸ್​ ಮೈತ್ರಿ ಸರ್ಕಾರದ 12 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. 

ಇತ್ತೀಚೆಗಷ್ಟೇ ವಿಜಯನಗರ ಶಾಸಕ ಆನಂದ್​ ಸಿಂಗ್ ರಾಜೀನಾಮೆ ನೀಡಿದ್ದರು. ಇಂದು 12 ಮಂದಿ ರಾಜೀನಾಮೆ ನೀಡಿದ್ದು, 13 ಮಂದಿ ಶಾಸಕರು ರಾಜೀನಾಮೆ ನೀಡಿದಂತಾಗಿದೆ. ಇದರಿಂದ ಮೈತ್ರಿ ಸರ್ಕಾರ ಆತಂಕಕ್ಕೆ ಸಿಲುಕಿದೆ. ರಾಮಲಿಂಗಾ ರೆಡ್ಡಿ  (ಬಿಟಿಎಂ ಲೇಔಟ್), ​ಬೈರತಿ ಬಸವರಾಜ್ ( ಕೆ.ಆರ್​​.ಪುರಂ), ಮುನಿರತ್ನ (ರಾಜರಾಜೇಶ್ವರಿ ನಗರ), ಎಸ್​.ಟಿ.ಸೋಮಶೇಖರ್​  (ಯಶವಂತಪುರ), ನಾರಾಯಣ ಗೌಡ ( ಕೆ.ಆರ್​.ಪೇಟೆ), ಹೆಚ್​ ವಿಶ್ವನಾಥ್  (ಹುಣಸೂರು), ಗೋಪಾಲಯ್ಯ -(ಮಹಾಲಕ್ಷ್ಮಿ ಲೇಔಟ್​), ರಮೇಶ್ ಜಾರಕಿಹೊಳಿ  (ಗೋಕಾಕ್), ಮಹೇಶ್ ಕುಮಟಳ್ಳಿ (ಅಥಣಿ), ಬಿ.ಸಿ.ಪಾಟೀಲ್  (ಹಿರೇಕೆರೂರು ), ಪ್ರತಾಪ್ ಗೌಡ ಪಾಟೀಲ್  (ಮಸ್ಕಿ ), ಶಿವರಾಮ್ ಹೆಬ್ಬಾರ್  (ಯಲ್ಲಾಪುರ) ಇಂದು ರಾಜೀನಾಮೆ ನೀಡಿರುವ ಶಾಸಕರು. 

 

 

RELATED ARTICLES

Related Articles

TRENDING ARTICLES