Sunday, October 27, 2024

‘ನಾರಿ ನೀ ನಾರಾಯಣಿ’ ಅಂದ್ರು ನಿರ್ಮಲಾ ಸೀತಾರಾಮನ್​..!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಮ್ಮ ಚೊಚ್ಚಲ ಬಜೆಟ್​ನಲ್ಲಿ ಮಹಿಳೆಯರಿಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಸ್ವಾಮಿ ವಿವೇಕಾನಂದರ, ಮಹಿಳೆಯರ ಸ್ಥಿತಿ ಬದಲಾಗದೆ ದೇಶದ ಸ್ಥಿತಿ ಬದಲಾಗಲ್ಲ ಎಂಬ ಸಂದೇಶವನ್ನು ಉಲ್ಲೇಖಿಸಿದ ಅವರು ನಾರಿ ನೀ ನಾರಾಯಣಿ ಎಂಬ ಸಂಸ್ಕೃತಿ ನಮ್ಮದು ಎಂದು ಉಚ್ಚರಿಸಿದ್ರು. ಮುದ್ರಾ ಯೋಜನೆಯಡಿ ಮಹಿಳೆಯರಿಗೆ 1 ಲಕ್ಷ ರೂ. ಸಾಲ, ಲಿಂಗ ತಾರತಮ್ಯ ನಿವಾರಣೆಗೆ ಹೊಸ ಯೋಜನೆ, ಮಹಿಳಾ ಸ್ವಸಹಾಯ ಸಂಘದ ಒಬ್ಬ ಮಹಿಳೆಗೆ ಜನ್​ಧನ್​​ ಅಂಕೌಂಟಿನಿಂದ 5000 ರೂ. ಸಾಲ, ಸ್ಟ್ಯಾಂಡ್‌ ಅಪ್‌ ಯೋಜನೆಯಡಿ SC/ST ಮಹಿಳೆಯರಿಗೆ ಸಾಲ ಸೌಲಭ್ಯ ನೀಡಲಾಗುವುದು.ಈ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗ್ತದೆ ಅಂತ ಭರವಸೆ ನೀಡಿದ್ರು. 

RELATED ARTICLES

Related Articles

TRENDING ARTICLES