Sunday, October 27, 2024

ಗುಂಡೂರಾವ್​ ಸಮ್ಮುಖದಲ್ಲೇ ಜಿಂದಾಲ್ ದಂಗಲ್​

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಹಿರಿಯ ಕಾಂಗ್ರೆಸ್ಸಿಗರ ಮಧ್ಯೆ ಸಂಧಾನ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಸಮ್ಮುಖದಲ್ಲೇ ಕೆ.ಜೆ. ಜಾರ್ಜ್​ ಮತ್ತು ಹೆಚ್​.ಕೆ. ಪಾಟೀಲ್​ ಸಂಧಾನ ನಡೆದಿದೆ. ಇಬ್ಬರಿಗೂ ಕೆಪಿಸಿಸಿ ಕಚೇರಿಗೆ ಬರುವಂತೆ ದಿನೇಶ್ ಗುಂಡೂರಾವ್ ಸೂಚಿಸಿದ್ದರು.

ಜಿಂದಾಲ್​ ಭೂಮಿ ನೀಡಿರುವುದಕ್ಕೆ ಹೆಚ್​.ಕೆ. ಪಾಟೀಲ್​ ಬಹಿರಂಗವಾಗಿ ಕಿಡಿಕಾರಿದ್ದರು. ಪಾಟೀಲ್​ ಅವರ ಬಹಿರಂಗ ಆಕ್ಷೇಪಕ್ಕೆ ಕೆ.ಜೆ. ಜಾರ್ಜ್​ ಬೇಸರ ತೋಡಿಕೊಂಡಿದ್ದರು. ಇದೀಗ ದಿನೇಶ್ ಗುಂಡೂರಾವ್ ಅವರು ಇಬ್ಬರನ್ನೂ ಮುಖಾಮುಖಿ ಕೂರಿಸಿ ಗೊಂದಲ‌ ನಿವಾರಣೆಗೆ ಮುಂದಾಗಿದ್ದಾರೆ. ಜಿಂದಾಲ್ ಕಂಪನಿಗೆ ಸರ್ಕಾರ ಭೂಮಿ ಪರಭಾರೆ ವಿಚಾರವಾಗಿ ಸಚಿವ ಜಾರ್ಜ್ ಮತ್ತು ಹೆಚ್. ಕೆ. ಪಾಟೀಲ್ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದಾರೆ. ಜಿಂದಾಲ್​ಗೆ ಭೂಮಿ ನೀಡಿರುವ ಬಗ್ಗೆ ಜಾರ್ಜ್ ವಿವರಣೆಯನ್ನ ನೀಡಲಿದ್ದು, ಸಚಿವ ಹೆಚ್. ಕೆ. ಪಾಟೀಲ್ ಅವರಿಗಿರುವ ಗೊಂದಲ ನಿವಾರಣೆಗೆ ದಿನೇಶ್ ಗುಂಡೂರಾವ್ ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES