Saturday, October 26, 2024

‘ರಿಸಲ್ಟ್​ ನಂತ್ರ ಮನೆಯೊಂದು 3 ಬಾಗಿಲಾಗಲಿದೆ ಕಾಂಗ್ರೆಸ್’​..!

ಕಲಬುರ್ಗಿ: ಮೇ 23ರ ನಂತರ ರಾಜ್ಯದಲ್ಲಿ ಭೂಕಂಪನವಾಗುತ್ತೆ ಅಂತ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್​​ ಹೇಳಿದ್ದಾರೆ.

ಚಿಂಚೋಳಿಯಲ್ಲಿ ಮಾತನಾಡಿದ ಅವರು, “ಫಲಿತಾಂಶದ ಬಳಿಕ 20 ಶಾಸಕರು ಬಿಜೆಪಿಗೆ ಬರುತ್ತಾರೆ. ಕಾಂಗ್ರೆಸ್‌ನ 20 ಶಾಸಕರು ಬಿಜೆಪಿಗೆ ಬರುವುದು ಪಕ್ಕಾ ಆಗಿದೆ. ಫಲಿತಾಂಶ ಬಂದ್ಮೇಲೆ ಕಾಂಗ್ರೆಸ್ ಮನೆಯೊಂದು 3 ಬಾಗಿಲು ಆಗಲಿದೆ. ಮೇ 23ರಂದು ಲೋಕಸಭಾ ಚುನಾವಣೆಯ ರಿಸಲ್ಟ್​ ಹೊರಬಿದ್ದ ನಂತರ ಭಸ್ಮಾಸುರ ಯಾರೆಂದು ಗೊತ್ತಾಗುತ್ತೆ’’ ಅಂತ ಹೇಳಿದ್ರು.

RELATED ARTICLES

Related Articles

TRENDING ARTICLES