Saturday, October 26, 2024

ಮೂರ್ಖತನದ ಸಿಎಂ ಅಧಿಕಾರದಲ್ಲಿದ್ದಾರೆ: ಪುಟ್ಟಸ್ವಾಮಿ

ಹುಬ್ಬಳ್ಳಿ: ಬಿ. ಎಸ್. ಯಡಿಯೂರಪ್ಪ ಸಿಎಂ ಆಗೋದನ್ನು ಯಾರಿಂದಲೂ ತಪ್ಪಿಸೋದಕ್ಕೆ ಸಾಧ್ಯವಿಲ್ಲ. ರಾಜ್ಯದಲ್ಲಿ ಮೂರ್ಖತನದ ಸಿಎಂ ಅಧಿಕಾರದಲ್ಲಿದ್ದಾರೆ ಅಂತ ಬಿಜೆಪಿ ವಕ್ತಾರ ಬಿ.ಜಿ.ಪುಟ್ಟಸ್ವಾಮಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,”ಜನರ ಹಿತಕ್ಕಿಂತ ಸಿಎಂಗೆ ಮಗನ ಗೆಲುವು ಮುಖ್ಯವಾಗಿದೆ. ಕಾಂಗ್ರೆಸ್-ಜೆಡಿಎಸ್ ನಾಯಕರ ಕಚ್ಚಾಟ ತಾರಕಕ್ಕೇರಿದೆ.  ‘ಮೈತ್ರಿ’ ಶಾಸಕರು ಬಿಜೆಪಿಗೆ ಬರಲು ಕ್ಯೂ ನಿಂತಿದ್ದಾರೆ. ರಮೇಶ್ ಜಾರಕಿಹೊಳಿ ಜೊತೆ 6 ಜನ ಶಾಸಕರಿದ್ದಾರೆ. ಮೇ 23ರ ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದಾರೆ” ಅಂತ ಹೇಳಿದ್ರು.

ಸಚಿವ ಡಿ. ಕೆ. ಶಿವಕುಮಾರ್ ಬಗ್ಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಆಸ್ತಿ ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ. ಡಿಕೆಶಿಗೆ ಹೋದಲ್ಲೆಲ್ಲ ನಾನೇ ಗೆಲ್ಲಿಸ್ತೀನಿ ಎಂಬ ಭ್ರಮೆಯಲ್ಲಿದ್ದಾರೆ” ಅಂತ ಹೇಳಿದ್ರು.

RELATED ARTICLES

Related Articles

TRENDING ARTICLES