Saturday, October 26, 2024

ಆ 20 ಶಾಸಕರು ನಿರ್ಧರಿಸ್ತಾರಾ ‘ದೋಸ್ತಿ’ ಭವಿಷ್ಯ?

ಕಲಬುರಗಿ : ‘ಮೈತ್ರಿ ಸರ್ಕಾರ ಬಿದ್ದೋಗುತ್ತೆ ಅಂತ ದಯವಿಟ್ಟು ಹೇಳಬೇಡಿ. ನಂಗೆ ಸಿಎಂ ಆಗೋ ಕನಸಿಲ್ಲ ಅಂತ ಎರಡು ದಿನಗಳ ಹಿಂದಷ್ಟೇ ಹೇಳಿದ್ದರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​ ಯಡಿಯೂರಪ್ಪ. ಆದರೆ, ಇಂದು ಅವರೇ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದು ಬಿಟ್ಟಿದ್ದಾರೆ..!
ಇಂದು ಕಲಬುರಗಿಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, ‘ದೋಸ್ತಿ ಸರ್ಕಾರದ ಭವಿಷ್ಯವನ್ನು 20 ಶಾಸಕರು ನಿರ್ಧರಿಸ್ತಾರೆ. ಮೇ.23 ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತ್ರ ರಾಜ್ಯದಲ್ಲಿ ಏನ್ ಬೇಕಾದ್ರೂ ಆಗ್ಬಹುದು. ಕಾಂಗ್ರೆಸ್​ನ ಪಕ್ಷದಲ್ಲಿ 20 ಶಾಸಕರು ಅಸಮಧಾನ ಹೊಂದಿದ್ದಾರೆ ಅಂತ ಹೇಳಿದ್ದಾರೆ.
ಸರ್ಕಾರ ಬೀಳಲಿ ಅಂತ ನಾನು ಹಗಲುಗನಸು ಕಾಣ್ತಿಲ್ಲ. ಅವರವರೇ ಹೊಡೆದಾಡಿಕೊಂಡು ಸರ್ಕಾರ ಬೀಳಿಸ್ತಾರೆ ಅಂತ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ. ಆ 20 ಶಾಸಕರು ನಿರ್ಧರಿಸ್ತಾರಾ ‘ದೋಸ್ತಿ’ ಭವಿಷ್ಯ? ಯಡಿಯೂರಪ್ಪ ಅವರು ನುಡಿದಿರುವ ಭವಿಷ್ಯ ಸತ್ಯವಾಗುತ್ತಾ ಅನ್ನೋದು ಕುತೂಹಲ.

RELATED ARTICLES

Related Articles

TRENDING ARTICLES