Saturday, October 26, 2024

ಕುಂದಗೋಳ ಉಪಸಮರದ ಅಖಾಡಕ್ಕೆ ಟ್ರಬಲ್​ ಶೂಟರ್​ ಎಂಟ್ರಿ..!

ಹುಬ್ಬಳ್ಳಿ: ಕುಂದಗೋಳ ಉಪಸಮರದ ಅಖಾಡದಲ್ಲಿ ಕ್ಷೇತ್ರದ ಉಸ್ತುವಾರಿಯನ್ನು ಸಚಿವ ಡಿ.ಕೆ. ಶಿವಕುಮಾರ್​ಗೆ ವಹಿಸಲಾಗಿದೆ. ಸಾಮೂಹಿಕ ನಾಯಕತ್ವಕ್ಕೆ ಮಣೆ ಹಾಕಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜಂಟಿ ಉಸ್ತುವಾರಿಯಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ, ಸಂತೋಷ ಲಾಡ್​ನ್ನು ನೇಮಿಸಿದ್ದಾರೆ. ಡಿಕೆಶಿ ಉಸ್ತುವಾರಿಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವ ಸತೀಶ್ ಜಾರಕಿಹೊಳಿಗೆ ಯಾವುದೇ ಜವಾಬ್ದಾರಿಯನ್ನು ನೀಡಿಲ್ಲ. ಮೇ 4 ರಂದು ಡಿಕೆಶಿ ಕುಂದಗೋಳಕ್ಕೆ ಆಗಮಿಸಲಿದ್ದಾರೆ. ಜಾರಕಿಹೊಳಿ ಅಸಮಧಾನದಿಂದ ನಾಮಪತ್ರ ಸಲ್ಲಿಕೆ ವೇಳೆಯೂ ಡಿ. ಕೆ ಶಿವಕುಮಾರ್ ಗೈರಾಗಿದ್ದರು.

RELATED ARTICLES

Related Articles

TRENDING ARTICLES