Saturday, October 26, 2024

ಕೇಂದ್ರ ಸಚಿವರ ಕಾರಿನ ಮೇಲೆ ದಾಳಿ

ಕೊಲ್ಕತ್ತಾ: ಕೇಂದ್ರ ಸಚಿವರ ಕಾರಿನ ಮೇಲೆ ಟಿಎಂಸಿ ಕಾರ್ಯಕರ್ತರ ದಾಳಿ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಅಸನ್ಸೋಲ್​ನಲ್ಲಿ ನಡೆದಿದೆ. ದಾಳಿಯಿಂದಾಗಿ ಕೇಂದ್ರ ಸಚಿವ ಬಾಬುಲ್​ ಸುಪ್ರಿಯೋ ಕಾರಿನ ಗಾಜುಗಳು ಪುಡಿಯಾಗಿವೆ.

ಪಶ್ಚಿಮ ಬಂಗಾಳದ ಅಸನ್ಸೋಲ್​ ಕ್ಷೇತ್ರದಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಉಭಯ ಪಕ್ಷಗಳ ಕಾರ್ಯಕರ್ತರು ದೊಣ್ಣೆ ಹಿಡಿದು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಅಸನ್ಸೋಲ್​ ಮತಗಟ್ಟೆ ಬಳಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರ ಹರಸಾಹಸಪಟ್ಟಿದ್ದಾರೆ. ಅಸನ್ಸೋಲ್​ ಕ್ಷೇತ್ರದಿಂದ ಕೇಂದ್ರ ಸಚಿವ ಬಾಬುಲ್​ ಸುಪ್ರಿಯೋ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಕೇಂದ್ರ ಸಚಿವರಿಗೆ ಟಿಎಂಸಿ ಅಭ್ಯರ್ಥಿ ಮೂನ್​ ಮೂನ್​ ಸೇನ್​ ಪ್ರಬಲ ಪೈಪೋಟಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES