Sunday, April 28, 2024

ಸಿಎಂ ಕಾರು ತಡೆದು ತಪಾಸಣೆ..!

ಬೆಂಗಳೂರು: ಸಿಎಂ ಹೆಚ್​. ಡಿ. ಕುಮಾರಸ್ವಾಮಿ ಅವರ ಕಾರನ್ನು ತಡೆದು ತಪಾಸಣೆ ನಡೆಸಲಾಗಿದೆ. ಸಿಎಂ ಕಾರನ್ನು ತಡೆದು ನಿಲ್ಲಿಸಿದ ಪೊಲೀಸ್ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಚನ್ನರಾಯಪಟ್ಟಣಕ್ಕೆ ತೆರಳುತ್ತಿದ್ದರು. ಹಾಸನ ಗಡಿ ಹಿರಿಸಾವೆ ಚೆಕ್ ಪೋಸ್ಟ್​​​​​ನಲ್ಲಿ ಕಾರನ್ನು ತಡೆದು ತಪಾಸಣೆ ಮಾಡಲಾಗಿದೆ. ಮಂಡ್ಯದ ನಾಗಮಂಗಲ ತಾಲೂಕಿನ ಹಿರಿಸಾವೆ ಚೆಕ್ ಪೋಸ್ಟ್​​ನಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಕಾರು ತಡೆದು ಪರಿಶೀಲನೆ ನಡೆಸಿದ್ದಾರೆ. ಸಿಎಂ ಕಾರು ತಡೆದು ಪರಿಶೀಲನೆ ನಡೆಸುವ ವೇಳೆ ಚುನಾವಣಾಧಿಕಾರಿಗಳು, ಪೊಲೀಸರು ಇದ್ದರು. ಅಧಿಕಾರಿಗಳು ಕಾರು ತಪಾಸಣೆ ನಡೆಸುವ ಸಂದರ್ಭ ಸಿಎಂ ಅವರು ಮೌನವಾಗಿದ್ದರು.

RELATED ARTICLES

Related Articles

TRENDING ARTICLES