ಹಾನ್ಗಲ್: ಹಾನಗಲ್ ಗ್ಯಾಂಗ್ರೇಪ್ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿ ರೋಡ್ ಶೋ ನಡೆಸಿದ್ದರು. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ಕೇಳಿಬಂದ ಬೆನ್ನಲ್ಲೇ ಆರೋಪಿಗಳು ಮತ್ತೆ ಜೈಲು ಪಾಲಾಗಿದ್ದು. ಈ ಪುಂಡರು ಜೈಲಿನಲ್ಲೂ ತಮ್ಮ ದರ್ಬಾರ್ ಮುಂದುವರಿಸಿದ್ದಾರೆ. ಈ ಕುರಿತ ಸೆರೆಮನೆಯಿಂದ ಬಿಡುಗಡೆಯಾಗಿ ಹೊರಗೆ ಬಂದಿರಯವ ಆರೋಪಿಯೊಬ್ಬ ಮಾಹಿತಿ ನೀಡಿದ್ದಾನೆ.
ಜಾಮೀನಿನ ಮೇಲೆ ಹೊರ ಬಂದಿದ್ದ ಗ್ಯಾಂಗ್ರೇಪ್ ಆರೋಪಿಗಳು, ಜೈಲಿನಿಂದ ಐಷಾರಾಮಿ ಕಾರುಗಳಲ್ಲಿ ರೋಡ್ ಶೋ ನಡೆಸಿದ್ದರು. ಆದರೆ ಪೊಲೀಸರು ಆರೋಪಿಗಳ ಹೆಡೆಮುರಿಕಟ್ಟಿ ಮತ್ತೆ ಪ್ರತ್ಯೇಕ ಪ್ರಕರಣದಲ್ಲಿ ಜೈಲುಗಟ್ಟಿ, ಜಾಮೀನು ಅರ್ಜಿ ತಿರಸ್ಕರಿಸಲು ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಇಷ್ಟೆಲ್ಲಾ ಆದರೂ ಕಾಮುಕರಿಗೆ ಮಾತ್ರ ಕಿಂಚಿತ್ತೂ ಬುದ್ದಿ ಬಂದಂತೆ ಕಾಣ್ತಿಲ್ಲ, ಯಾಕೆಂದರೆ ಹಾವೇರಿ ಸಬ್ ಜೈಲ್ಲನ್ನೆ ಸ್ವರ್ಗವಾಗಿಸಿ
ಕೊಂಡಿರೋ ಪುಂಡರು ಒಳಗಡೆ ಗ್ಯಾಂಗ್ವಾರ್ ಶುರು ಮಾಡಿದ್ದಾರೆ. ಇದನ್ನೂ ಓದಿ :ಚಾಮುಂಡಿ ಬೆಟ್ಟಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ
ಈ ಕುರಿತು ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿರುವ ದಲಿತ ಯುವಕ ಸುದೀಪ್ ” ಜೈಲಿನೊಳಗೆ ಯಾರೆ ಹೊಸ ಖೈದಿ ಬಂದರು ಅವರು ಯಾವ ಕೇಸ್ ಮೇಲೆ ಬಂದಿದ್ದಾರೆ ಎಂದು ತಿಳಿಸಬೇಕು. ಇಲ್ಲದಿದ್ದರೆ ಅವರ ಮೇಳೆ ಹಲ್ಲೆ ನಡೆಸುತ್ತಾರೆ. ಹೊರಗಡೆ ಬಂದು ರೋಡ್ ಶೋ ನಡೆಸಿದ್ದಕ್ಕಿಂತ 10 ಪಟ್ಟು ಒಳಗೆ ದೌರ್ಜನ್ಯ ನಡೆಸುತ್ತಿದ್ದಾರೆ. ಗ್ಯಾಂಗ್ ರೇಪ್ ಆರೋಪಿಗಳಿಗೆ ಗುಟ್ಕಾ ಸೇರಿದಂತೆ ಬಿರಿಯಾನಿ ಸಪ್ಲೈ ಆಗುತ್ತೆ.
ಇದನ್ನೂ ಓದಿ:ಪೋರ್ಸ್ ಮಾಡಿ ಫೈನ್ ಹಾಕ್ಬೇಡಿ; ಮಂಡ್ಯ ಪೊಲೀಸರಿಗೆ ಉಪಲೋಕಾಯುಕ್ತ ಬಿ. ವೀರಪ್ಪರಿಂದ ಎಚ್ಚರಿಕೆ
ಅಷ್ಟೇ ಅಲ್ಲದೆ ಗ್ಯಾಂಗ್ ರೇಪ್ ಆರೋಪಿಗಳು ಜೈಲ್ಲಿನಲ್ಲೇ 300ರೂಗಳಂತೆ ಹಪ್ತಾ ವಸೂಲಿ ಮಾಡ್ತಿದ್ದಾರೆ. ಜೈಲು ಸಿಬ್ಬಂದಿಗಳಿಗೆ ಈ ಆರೋಪಿಗಳು ಏಕವಚನದಲ್ಲೇ ಬೈತಾರೆ. ಆದರು ಜೈಲು ಸಿಬ್ಬಂದಿಗಳು ಏನು ಮಾಡ್ತೀಲ್ಲ. ಜೈಲಿನಲ್ಲಿ ಗ್ಯಾಂಗ್ ರೇಪ್ ಆರೋಪಿಗಳು ರಾಕ್ಷಸ ಸಂಸ್ಕೃತಿಗೆ ತೋರಿಸಿದ್ದಾರೆ ಎಂದು ಯುವಕನೊಬ್ಬ ಆರೋಪಿಸಿದ್ದಾರೆ. ಇದರ ನಡುವೆ ಜೈಲಾಧಿಕಾರಿಗಳ ಕಾರ್ಯಕ್ಷಮತೆ ಬಗ್ಗೆ ಪ್ರಶ್ನೆಗಳು ಏಳತೊಡಗಿವೆ.