ಹೊಸಕೋಟೆ : ತಾಯಿಯೊಬ್ಬಳು ತನ್ನ ನವಜಾತ ಶಿಶುವನ್ನು ಜಿಟಿ-ಜಿಟಿ ಮಳೆಯಲ್ಲಿ ಬಿಟ್ಟು ಹೋಗಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದ್ದು. ಮಗು ಅಳುವುದನ್ನು ಗಮನಿಸಿದ ಸ್ಥಳೀಯರು ಮಗುವನ್ನು ಮಹಿಳಾ ಮಕ್ಕಳ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಅನೇಕಲ್ನ, ಹೊಸಪೇಟೆ ನಗರದ ಅಮಾನಿಕೆರೆ ಬಳಿ ಘಟನೆ ನಡೆದಿದ್ದು. ಪಾಪಿ ತಾಯಿಯೊಬ್ಬಳು ಮೂರು ದಿನದ ಹಿಂದೆ ಜನಿಸಿದ್ದ ಹಸುಗೂಸನ್ನು ಬ್ಯಾಗ್ನಲ್ಲಿ ಮಲಗಿಸಿ, ಕೆರೆ ಏರಿ ಮೇಲೆ ಬಿಟ್ಟು ಹೋಗಿದ್ದಾಳೆ. ಜಿಟಿ-ಜಿಟಿ ಮಳೆಯಿಂದಾಗಿ ಮಗು ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ :ಸಿಂಗಾಪುರ-ಹಾಂಕಾಂಗ್ನಲ್ಲಿ ಕೋವಿಡ್ ಹೆಚ್ಚಳ: ಭಾರತದಲ್ಲೂ 257 ಪ್ರಕರಣಗಳು ಪತ್ತೆ
ಘಟನಾ ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಬ್ಯಾಗ್ನಲ್ಲಿದ್ದ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದು ಆರೈಕೆ ಮಾಡಿದ್ದಾರೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಮಗುವಿನ ತಾಯಿ ಯಾರೂ ಎಂಬುದು ಇನ್ನಷ್ಟೆ ತಿಳಿಯಬೇಕಿದೆ.