NIA ತನಿಖೆ ನಡೆಸಿದರೆ, ಕಾಂಗ್ರೆಸ್​-ಪಿಎಫ್​ಐ ನಡುವಿನ ಹೊಂದಾಣಿಕೆ ಹೊರ ಬರುತ್ತದೆ: ಬ್ರಿಜೇಶ್​ ಚೌಟ

ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬಗ್ಗೆ ಮಾತನಾಡಿದ ಸಂಸದ ಬ್ರಿಜೇಶ್​ ಚೌಟ ಗೃಹ ಸಚಿವ ಪರಮೇಶ್ವರ್ ಸೇರಿದಂತೆ, ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು. ಸುಹಾಸ್​ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್​ಐಎಗೆ ವಹಿಸಿದರೆ ಕಾಂಗ್ರೆಸ್​ ಮತ್ತು ಪಿಎಫ್​ಐ ನಡುವಿನ ಹೊಂದಾಣಿಕೆ ಹೊರಗೆ ಬರುತ್ತದೆ ಎಂಬ ಭಯ ಸರ್ಕಾರಕ್ಕೆ ಇದೆ ಎಂದು ಬ್ರಿಜೇಶ್​ ಚೌಟ ಹೇಳಿದರು.

ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬ್ರಿಜೇಶ್​ ಚೌಟ “ಗೃಹ ಸಚಿವ ಪರಮೇಶ್ವರ್​ ಪಿಎಫ್​ಐ ಕ್ಯಾಡರ್​ಗಳನ್ನು ಸಂತೈಸಲು ಬಂದು ಹೋಗಿದ್ದಾರೆ. ಈ ಪ್ರಕರಣವನ್ನ NIA ತನಿಖೆಗೆ ಕೊಡಲು ಆಗಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ NIAಗೆ ಕೊಟ್ಟರೆ ಕಾಂಗ್ರೆಸ್​ ಮತ್ತು ಪಿಎಫ್​ಐ ಹೊಂದಾಣಿಕೆ ಹೊರಬರುವ ಭಯ ಸರ್ಕಾರಕ್ಕೆ ಇದೆಯಾ..?. ಸ್ಪೀಕರ್ ಖಾದರ್, ಗೃಹ ಸಚಿವರ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು. ಇದನ್ನೂ ಓದಿ :‘ಸಿದ್ದರಾಮಯ್ಯನನ್ನ ಕೊಂದರೆ ಹಿಂದುಗಳಿಗೆ ನೆಮ್ಮದಿ ಸಿಗುತ್ತೆ’ ಎಂದು ಪೋಸ್ಟ್​ ಹಾಕಿದ್ದ ಹೋಂಗಾರ್ಡ್ ಅರೆಸ್ಟ್​

ಯುಟಿ ಖಾದರ್ ಅಣತಿಯಂತೆ ಸಿದ್ದರಾಮಯ್ಯ ಕೈ ಕಟ್ಟಿ ಹಾಕುವ ಕೆಲಸ ಆಗಿದೆ ಎಂದು ಹೇಳಿದ ಬ್ರಿಜೇಶ್​ ಚೌಟಾ ‘ತನಿಖೆಗೆ ಬೆಂಬಲ ನೀಡಬೇಕಾದ ಸ್ಪೀಕರ್, ಎನ್ಐಎ ತನಿಖೆಗೆ ಅಡ್ಡಿ ಬರುವುದೇ ? ತನಿಖೆ ಆಗೋ ಮೊದಲೇ ಸ್ಪೀಕರ್ ಖಾದರ್ ಫಾಜಿಲ್ ಕುಟುಂಬದ ಪರ ನಿಂತು ಸಮರ್ಥಿಸುವ ಆತುರತೆ ಏನಿತ್ತು ? 2023ರಲ್ಲಿ ಇಂಡಿಯಾ ಟುಡೇ PFI ಮತ್ತು SDPI ಲಿಂಕಗ ಬಗ್ಗೆ ವರದಿ ಮಾಡಿತ್ತು. ರಾಷ್ಟ್ರ ವಿರೋಧಿ, ಇಸ್ಲಾಮಿಕ್ ಮೂಲಭೂತವಾದ, ಜಿಹಾದಿ ಎಲಿಮೆಂಟ್ ಬಗ್ಗೆ ವರದಿ ಬಂದಿತ್ತು.

ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರಿನ ಎಸ್​ಡಿಪಿಐ ನಾಯಕರು ಪಿಎಫ್​ಐ ನೆಟ್ವರ್ಕ್​ ಬೆಳೆಸಿದ್ದನ್ನ ಅವರೇ ಒಪ್ಪಿಕೊಂಡಿದ್ದಾರೆ. ಪ್ರವೀಣ್ ನೆಟ್ಟಾರು ಪ್ರಕರಣ ಸೂತ್ರಧಾರ ಮುಸ್ತಫಾ ಪೈಚಾರುವನ್ನು ಬಂಧಿಸಿದ್ದು NIA. ಆತ ಚೆನೈನಲ್ಲಿ ಅವಿತುಕೊಳ್ಳಲು ಸಹಾಯ ಮಾಡಿದವರನ್ನು ಎನ್​ಐಎ ಬಂಧಿಸಿತ್ತು. ಆರೋಪಿಗಳ ಜೊತೆ ಅವರ ಹಿಡನ್​ ಅಜೆಂಡವನ್ನು ಬಯಲಿಗೆ ಎಳೆದಿತ್ತು. ಇದನೆಲ್ಲ ಸ್ಥಳಿಯ ಪೊಲೀಸರು ಮಾಡಲಿಲ್ಲ. ಇದಕ್ಕೆ ಎನ್​ಐಎ ಬರಬೇಕಯ್ತು.

ಇದನ್ನೂ ಓದಿ :‘ತಪ್ಪು ಯಾರದ್ದು ಎಂದು ಪ್ರಜ್ಞಾವಂತ ಕನ್ನಡಿಗರು ನಿರ್ಧರಿಸಲಿ’: ಸುದೀರ್ಘ ಪತ್ರ ಬರೆದ ಸೋನು ನಿಗಮ್​

ಫಾಜಿಲ್ ಕುಟುಂಬಕ್ಕೆ ಕ್ಲೀನ್ ಚಿಟ್ ಕೊಟ್ಟವರು ಕರಾವಳಿಗೆ ಕೆಟ್ಟ ಹೆಸರು ತರುವ ಯತ್ನದಲ್ಲಿದ್ದಾರೆ. ಎಲ್ಲ ಸುಳ್ಳುಗಳನ್ನು ಬದಿಗಿಟ್ಟು ರಾಜ್ಯ ಸರ್ಕಾರ ತಕ್ಷಣ ಈ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಬೇಕು. ಕರಾವಳಿಯಲ್ಲಿ ಹರಡಿರುವ ರಕ್ತಸಿಕ್ತ ಜಾಲವನ್ನು ಕಿತ್ತು ಹಾಕುವ ಕೆಲಸ ಆಗಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಯ ಹಳಿ ತಪ್ಪಿಸುವ ಸಂಚು ಇದರ ಹಿಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರು ರಾಷ್ಟ್ರೀಯ ಹಿತ ಬಯಸುವವರು. ಕಮ್ಯುನಲ್​ ಎಂದು ಹೇಳಿ ಪ್ರಕರಣದ ನೈಜತೆಯನ್ನು ಮರೆಮಾಚಬೇಡಿ ಎಂದು ಬ್ರಿಜೇಶ್​ ಚೌಟಾ ಹೇಳಿದರು.

RELATED ARTICLES

Related Articles

TRENDING ARTICLES